ಕೊಳ್ಳೇಗಾಲ: ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

Update: 2018-01-23 13:04 GMT

ಕೊಳ್ಳೇಗಾಲ,ಜ.23: ಪಟ್ಟಣದ ಮುಡಿಗುಂಡ ನಾಯಕರ ಹೊಸ ಬಡಾವಣೆಯಲ್ಲಿ ಟಿಎಸ್‍ಪಿ ಯೋಜನೆಯಡಿ ಸುಮಾರು 25 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಎಸ್.ಜಯಣ್ಣ ಅವರು ಮಂಗಳವಾರ ಗುದ್ದಲಿಪೂಜೆ ನೇರೆವೇರಿಸಿದರು.

ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಗೆ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಎಸ್‍ಸಿ ಎಸ್‍ಟಿ ಜನಾಂಗದ ರಸ್ತೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವಲ್ಲಿ ಕ್ರಮಗೊಂಡಿದೆ. ಅದರಂತೆ ಮುಡಿಗುಂಡ ನಾಯಕರ ಬಡಾವಣೆಯ ಹೊಸ ಬಡಾವಣೆಯಲ್ಲಿ 175 ಮೀ ಉದ್ದಕ್ಕೆ ಸಿಸಿ ರಸ್ತೆ ಮತ್ತು ಎರಡು ಬದಿಗಳಲ್ಲಿ 350 ಮೀ ಉದ್ದಕ್ಕೆ ಸಿಸಿ ಚರಂಡಿ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಸಂದರ್ಭದ ವೇಳೆ  ಇಲ್ಲಿನ ಮುಖಂಡರು ಜವಾಬ್ದಾರಿ ಹೊತ್ತು ಬಡಾವಣೆಯಲ್ಲಿ ಗುಣಮಟ್ಟದ ರಸ್ತೆಯನ್ನು ಗುತ್ತಿಗೆದಾರರಿಂದ ನಿರ್ಮಾಣ ಮಾಡಿಸಿಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ನಗರಸಭೆ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷ ಶಿವಾನಂದ, ಸ್ಥಾಯಿ ಸಮಿತಿ ಸದಸ್ಯ ಹರ್ಷ, ಸದಸ್ಯರಾದ ನಂಜುಂಡ, ಮಲ್ಲಿಕಾರ್ಜುನ, ರಾಘವೇಂದ್ರ, ಶಾಸಕರ ಆಪ್ತ ಸಹಾಯಕ ಮುಡಿಗುಂಡ ಶಾಂತರಾಜು, ಬಸ್ತೀಪುರ ಅಂಬೇಡ್ಕರ್ ಸಂಘದ ಅಧ್ಯಕ್ಷ ರವಿ, ಇಂಜಿನಿಯರ್ ರಾಜು, ಮುಖಂಡರಾದ ನಾರಾಯಣ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News