ತುಮಕೂರು: ತಿಪಟೂರು ಉಪ ಕಾರಾಗೃಹದಲ್ಲಿ ಕೈದಿಗಳ ದಾಂಧಲೆ

Update: 2018-02-15 09:24 GMT

ತುಮಕೂರು, ಫೆ. 15: ಮದ್ಯಪಾನ ಮಾಡಿದ ಅಮಲಿನಲ್ಲಿ ಸುಮಾರು 25 ಮಂದಿ ಕೈದಿಗಳು ಜೈಲಿನ ಬಾಗಿಲುಗಳು, ಟಿ.ವಿ., ಟೇಬಲ್ ಹಾಗು ದಾಖಲೆ ಪತ್ರಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿ ಸ್ಥಳಕ್ಕೆ ಹೋದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿರುವ ಘಟನೆ ತಿಪಟೂರು ಉಪಕಾರಾಗೃಹದಲ್ಲಿ ಗುರುವಾರ ಮುಂಜಾನೆ 2:30ರ ಸುಮಾರಿಗೆ ನಡೆದಿದೆ.

ಜೈಲಿನ ಮುಖ್ಯ ದ್ವಾರವನ್ನು ಮುಚ್ಚಿದ ಕೈದಿಗಳು, ಪ್ರಧಾನ ನ್ಯಾಯಾಧೀಶರನ್ನು ಸ್ಥಳಕ್ಕೆ ಕರೆಸಬೇಕೆಂದು ಪಟ್ಟು ಹಿಡಿದು ದಾಂಧಲೆ ನಡೆಸಿದ್ದಾರೆ ಎಂದು ತಿಳದುಬಂದಿದೆ.

ಜಿಲ್ಲೆಯ ಹೊರಭಾಗದಲ್ಲಿರುವ ಬಂಧೀಖಾನೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಒಟ್ಟು 27 ಮಂದಿ ಖೈದಿಗಳಿದ್ದು, ಜೈಲಿನಲ್ಲಿ ರಾತ್ರಿ ಮೂವರು ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದರು. 

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News