ಮುಂಡಗೋಡ: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ

Update: 2018-02-17 11:00 GMT

ಮುಂಡಗೋಡ,ಫೆ.17: ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯ ಪರಿಕರಗಳು ಸುಟ್ಟು ಅಪಾರ ನಷ್ಟ ಉಂಟಾದ ಘಟನೆ ತಾಲೂಕಿನ ನಾಗನೂರ ರಸ್ತೆಯ ಕಾತೂರ ಗ್ರಾಮದಲ್ಲಿ ನಡೆದಿದೆ

 ಬಸವ್ವ ಪೂಜಾರ ಎಂಬ ಮಹಿಳೆಗೆ ಸೇರಿದ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಮನೆಯವರೆಲ್ಲಾ ಶನಿವಾರ ಬುತ್ತಿಕಟ್ಟಿಕೊಂಡು ಕೂಲಿ ಕೆಲಸಕ್ಕಾಗಿ ಬೇರೆ ಗ್ರಾಮಕ್ಕೆ ಹೋಗಿದ್ದರು ಎನ್ನಲಾಗಿದೆ. ದೇವರಿಗೆ ಹಚ್ಚಿದ ದೀಪ ಉರುಳಿ ಬಿದ್ದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮನೆಯ ಛಾವಣಿ, ಪಾತ್ರೆ-ಪಗಡೆ, ಬಟ್ಟೆ, ಟಿವಿ, ದವಸ ಧಾನ್ಯಗಳು, ಆಸ್ತಿಗೆ ಸಂಬಂದ ಪಟ್ಟ ದಾಖಲೆಗಳು ಹಾಗೂ ಇನ್ನಿತರ ಗೃಹ ಉಪಯೋಗಿ ವಸ್ತುಗಳು  ಬೆಂಕಿಗಾಹುತಿಯಾಗಿವೆ. ಸ್ಥಳೀಯರು ಸೇರಿ ಬೆಂಕಿ ನಂದಿಸುವುಷ್ಟರಲ್ಲಿ ಮನೆಯಲ್ಲಿನ ಶೇ. 80 ರಷ್ಟು ವಸ್ತುಗಳನ್ನು ಬೆಂಕಿ ತನ್ನ ಒಡಲಿಗೆ ಹಾಕಿಕೊಂಡಿತ್ತು ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಮಾಜಿ ಶಾಸಕ ವಿ.ಎಸ್.ಪಾಟೀಲ, ಸ್ಥಳಿಕರಾದ ಪ್ರಕಾಶ ಅಜ್ಜಂನವರ, ಬಿಜೆಪಿಯ ಅಶೋಕ ಚಲವಾದಿ, ಸತೀಶ ಹಂಚಿನಮನಿ, ಶಿವಾಜಿ ಶಿಂಧೆ, ಈರಪ್ಪ ಆಲಕಳ್ಳಿ, ಶಿವಾಜಿ ಪಾಠನಕರ, ಸುರೇಶ ಡೊಳ್ಳೆಶ್ವರ ಸೇರಿದಂತೆ ಮುಂತಾದವರು ಭೇಟಿ, ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News