ಮಡಿಕೇರಿ: ಮಾಧ್ಯಮ ಫೆಸ್ಟ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಪತ್ರಿಕೋದ್ಯಮ ವಿದ್ಯಾರ್ಥಿಗಳು

Update: 2018-02-17 11:55 GMT

ಮಡಿಕೇರಿ, ಫೆ.17: ಮೂಡಬಿದರೆ ಆಳ್ವಾಸ್ ಕಾಲೇಜಿನಲ್ಲಿ ಫೆ.16 ರಂದು ನಡೆದ ರಾಜ್ಯಮಟ್ಟದ ಮಾದ್ಯಮ ಫೆಸ್ಟ್ ನಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಮಗ್ರ ಸ್ಪರ್ಧಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 

ಕಿರುಚಿತ್ರ ವಿಭಾಗದಲ್ಲಿ ಪ್ರಥಮ, ಛಾಯಾಚಿತ್ರ ವಿಭಾಗದಲ್ಲಿ ಪ್ರಥಮ, ಸಾಕ್ಷ್ಯ ಚಿತ್ರ ವಿಭಾಗದಲ್ಲಿ ದ್ವಿತೀಯ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.

ಪತ್ರಿಕೋದ್ಯಮ ಉಪನ್ಯಾಸಕಿ ಮೋನಿಕ ಎ.ಎನ್. ನೇತೃತ್ವದಲ್ಲಿ ಅಂತಿಮ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಲೋಹಿತ್ ಎಂ ಆರ್, ಮೋಕ್ಷ ರೈ, ಚಂದ್ರಶೇಖರ್, ಗಾನವಿ ಗಣಪತಿ, ಅಕ್ಷಯ್ ರೈ, ಶಿವಕುಮಾರ್ ಎಚ್. ಎ, ಶಿವಕುಮಾರ್ ಎಚ್.ಎಲ್, ವಿಜಯ್ ಬಿ ಹಾಗೂ ಪ್ರಥಮ ಬಿ.ಎ ವಿದ್ಯಾರ್ಥಿಗಳಾದ ರಾಜೇಶ್ ಜಿ ನಾಯಕ್, ರಾಧಿಕಾ ವೇಲಾಯುದನ್, ವೇದಶ್ರೀ ಮಹದೇವಪ್ಪ ಇತರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News