ಬಾಗೇಪಲ್ಲಿ: ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಗೌರವಾರ್ಥ ಶ್ರದ್ದಾಂಜಲಿ ಸಭೆ

Update: 2018-02-20 11:38 GMT

ಬಾಗೇಪಲ್ಲಿ,ಫೆ.20: ರೈತ ಸಂಘದ ಹೋರಾಟಗಾರರ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಗೌರವಾರ್ಥ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಳಗದಿಂದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಶ್ರದ್ದಾಂಜಲಿ ಸಭೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನ ಬಳಗದ ಅಧ್ಯಕ್ಷ ಬಿಟಿಸಿ ಸೀನಾ ಮಾತನಾಡಿ, ರೈತ ಚಳುವಳಿಯ ಹೋರಾಟಗಾರ ಪುಟ್ಟಣ್ಣಯ್ಯ ನಿಧನದಿಂದ ರೈತ ಚಳುವಳಿಗೆ ಹಿನ್ನೆಡೆಯಾಗಿದೆ. ಶಾಸಕರಾಗಿ ಆಯ್ಕೆಯಾದ ನಂತರ ವಿಧಾನಸಭೆ ಅಧೀವೇಶನದಲ್ಲಿ ರೈತರ ಆತ್ಮಹತ್ಯೆ ಹಾಗೂ ಮುಂತಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಇಂತಹ ಮಹಾನ್ ಹೋರಾಟಗಾರ ನಿಧನಕ್ಕೆ ರಾಜ್ಯದ ರೈತರಿಗೆ ತುಂಬಲಾರದ ನಷ್ಟ ಎಂದರು.

ಈ ಸಂದರ್ಭದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ತಾಲೂಕು ಪ್ರಧಾನ ಕಾರ್ಯದರ್ಶಿ ಜಬೀವುಲ್ಲಾ, ನಗರ ಘಟಕದ ಅಧ್ಯಕ್ಷ ಬಿ.ಎನ್.ಸುರೇಶ್‍ಬಾಬು, ತಾಲೂಕು ರಾಜ್ ಕುಮಾರ್ ಸೇವಾ ಟ್ರಸ್ಟ್ ಅಧ್ಯಕ್ಷ ಯಲ್ಲಂಪಲ್ಲಿ ಕೆ.ರಮೇಶ್ ಹಾಗೂ ಮುಖಂಡರಾದ ನಾಗೀರೆಡ್ಡಿ, ಬಾಬಾಜಾನ್, ಚಂದ್ರ, ಸಿರಾಜ್, ಹಿದಾಯತುಲ್ಲಾ, ಬಾಬಾ ಫಕ್ರುದ್ದೀನ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News