ಮೈಸೂರು: ಕಾರು ಅಪಘಾತದಲ್ಲಿ ಸುದ್ದಿವಾಹಿನಿ ನಿರೂಪಕಿ ಮೃತ್ಯು

Update: 2018-02-20 15:42 GMT

ಮೈಸೂರು,ಫೆ.20: ಸ್ಥಳೀಯ ಸುದ್ದಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಿರೂಪಕಿ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಮೈಸೂರಿನ ಸಿದ್ಧರಾಮಯ್ಯ ಪಾರ್ಕ್ ಕೆ.ಆರ್.ಎಸ್.ರಸ್ತೆ ಮೇಟಗಳ್ಳಿ ನಿವಾಸಿ ವಿಜೇತ(21) ಮೃತ ನಿರೂಪಕಿ ಎಂದು ತಿಳಿದು ಬಂದಿದೆ.

ಕಳೆದ 15 ದಿನಗಳ ಹಿಂದೆ ಸ್ನೇಹಿತರೊಂದಿಗೆ ತಲಕಾಡಿಗೆ ತೆರಳಿದ್ದ ವೇಳೆ ಇವರ ಕಾರು ಪಲ್ಟಿ ಹೊಡೆದಿದ್ದು, ಕಾರು ಬಿದ್ದ ರಭಸಕ್ಕೆ ವಿಜೇತಾಳಿಗೆ ತೀವ್ರ ಗಾಯವಾಗಿತ್ತು. ನಂತರ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ ವಿಜೇತ ಮೃತಪಟ್ಟಿದ್ದಾಳೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಪತ್ರಿಕೋದ್ಯಕಮ ಮಿತ್ರರು ಅಗಲಿದ ಸ್ನೇಹಿತೆಗೆ ಕಂಬನಿ ಮಿಡಿದಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News