ಎಲ್ಲಿ ಸುತ್ತಿಕೊಂಡು ಬಂದರೂ ಇಲ್ಲಿಗೆ ಬರಬೇಕಲ್ಲವೇ: ಸಚಿವ ಮಹದೇವಪ್ಪ

Update: 2018-03-05 16:58 GMT

ಮೈಸೂರು,ಮಾ.5: ನಾನು ಎಲ್ಲಿ ಸುತ್ತಿಕೊಂಡು ಬಂದರೂ ಕೊನೆಯಲ್ಲಿ ಇಲ್ಲಿಗೇ ಬರಬೇಕಲ್ಲವೇ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಕ್ಷೇತ್ರ ಬದಲಾವಣೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗುಟ್ಟು ಬಿಟ್ಟುಕೊಡದೇ ಉತ್ತರಿಸಿದರು.

ಇಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಬದಲಾವಣೆ ಮಾಡಿ ಈ ಬಾರಿ ಬೆಂಗಳೂರಿನ ಸಿ.ವಿ. ರಾಮನ್ ನಗರದಿಂದ ಸ್ಪರ್ಧೆ ಮಾಡುವ ಸಂಭವವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ನಾನು ಎಲ್ಲಿ ಸುತ್ತಿಕೊಂಡು ಬಂದರೂ ಕೊನೆಗೆ ಇಲ್ಲಿಗೆ ಬರಬೇಕಲ್ಲವೇ. ಇಲ್ಲಿಯೇ ಇದ್ದೇನೆ. ಆಗಾಗ ಸುತ್ತಾಡುತ್ತಿರುತ್ತೇನೆ ಎಂದು ಯಾವ ಕ್ಷೇತ್ರದಿಂದ ಸ್ಪರ್ಧೆ ಎಂಬ ಬಗ್ಗೆ ಗುಟ್ಟು ಬಿಡದೆ ಒಗಟಿನಿಂದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. 

ಇತ್ತೀಚೆಗೆ ಬೆಂಗಳೂರಿನಲ್ಲಿ ಶಾಸಕ ಹಾರಿಸ್ ಮಗನ ಪ್ರಕರಣ ಹಾಗೂ ನಾರಾಯಣಸ್ವಾಮಿ ಪ್ರಕರಣದಿಂದ ಸಚಿವ ಮಹದೇವಪ್ಪ ಬೆಂಗಳೂರಿನಿಂದ ಸ್ಪರ್ಧೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮೈಸೂರು ಜಿಲ್ಲೆಯಿಂದಲೇ ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News