ಚಂದ್ರಬಾಬು ನಾಯ್ಡು ಸಂಪುಟಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಸಚಿವರು

Update: 2018-03-08 07:14 GMT

ಹೊಸದಿಲ್ಲಿ, ಮಾ.8: ಆಂದ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕುರಿತಂತೆ ಕೇಂದ್ರ ಹಾಗು ಟಿಡಿಪಿ ನಡುವಿನ ಮನಸ್ತಾಪದ ನಡುವೆ ಚಂದ್ರಬಾಬು ನಾಯ್ಡು ಸಂಪುಟದಲ್ಲಿರುವ ಬಿಜೆಪಿಯ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ.

ಆರೋಗ್ಯ ಹಾಗು ವೈದ್ಯಕೀಯ ಶಿಕ್ಷಣ ಸಚಿವರಾದ ಕಮಿನೇನಿ ಶ್ರೀನಿವಾಸ್ ಹಾಗು ದತ್ತಿ ಸಚಿವ ಮಾಣಿಕ್ಯಲ ರಾವ್ ಅವರು ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು.

“ಈ ನಿರ್ಧಾರವು ನೋವು ತಂದಿದೆ. ಇದು ನಡೆಯಬಾರದಿತ್ತು. ಜನರ ಭಾವನೆಗಳು ಅತಿ ಮುಖ್ಯವಾಗಿದ್ದು, ವಿಶೇಷ ಸ್ಥಾನಮಾನವು ಆಂದ್ರ ಪ್ರದೇಶದ ಹಕ್ಕು ಎಂದು ಜನರು ಭಾವಿಸುತ್ತಾರೆ. ರಾಜ್ಯದ ಅಭಿವೃದ್ಧಿಯೇ ನಮ್ಮ ಬದ್ಧತೆಯಾಗಿದೆ” ಎಂದು ಕಮಿನೇನಿ ಶ್ರೀನಿವಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News