ದೇಶದಲ್ಲಿ ಶೀಘ್ರದಲ್ಲೇ ತೃತೀಯ ಶಕ್ತಿ ಉದಯ: ಎಚ್ ಡಿ ದೇವೇಗೌಡ

Update: 2018-03-15 07:49 GMT

ಹಾಸನ, ಮಾ.15: ದೇಶದಲ್ಲಿ ಶೀಘ್ರವೇ ತೃತೀಯ ಶಕ್ತಿ ಉದಯಿಸಲಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.

ಹಾಸನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಬಿಎಸ್ಪಿ ನಾಯಕಿ ಮಾಯಾವತಿ ಅವರು ದೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುತ್ತಿದ್ದಾರೆ. ಅವರ ಯತ್ನಕ್ಕೆ  ಶೀಘ್ರದಲ್ಲೇ ಹೊಸ ರೂಪ  ಬರಲಿದೆ ಎಂದು ಅವರು ಹೇಳಿದರು.

ಮಾಯಾವತಿ ಅವರು ಪ್ರಾದೇಶಿಕ ಶಕ್ತಿಗಳನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್ ಗಿಂತ ಮುಂದಿದ್ದಾರೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News