ಚಿಕ್ಕಮಗಳೂರು: ತಂದೆಯ ಮೇಲೆಯೇ ಕತ್ತಿಯಿಂದ ಹಲ್ಲೆ ಮಾಡಿದ ಮಗ

Update: 2018-03-15 17:04 GMT

ಚಿಕ್ಕಮಗಳೂರು,ಮಾ.15: ಕ್ಷುಲ್ಲಕ ಕಾರಣಕ್ಕೆ ಮಗನು ತಂದೆ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ.

ಮನೆ ಪಾಲು ಮಾಡುವ ವೇಳೆ ಹಂಚಿನ ವಿಚಾರದಲ್ಲಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮನೆಯ ಹಂಚು ನನಗೆ ಬೇಕು ಎಂದು ಆರೋಪಿ ಅಣ್ಣಪ್ಪ ಹೇಳಿದ್ದಾನೆ. ಆದರೆ ತಂದೆ ಭದ್ರಾ ನಾಯ್ಕ್ ಹಂಚು ತಮ್ಮನಿಗೆ ಕೊಡುವುದು ಎಂದು ಹೇಳಿದ್ದು, ಈ ಸಂದರ್ಭ ಅಣ್ಣಪ್ಪ ತಂದೆಯ ಮೇಲೆಯೇ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ನಂತರ ತಮ್ಮನ ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡ ಭದ್ರಾ ನಾಯ್ಕ್ ರನ್ನು ಶಿವಮೊಗ್ಗಾದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ಮಧ್ಯೆ ಹೊರಾಡುತ್ತಿದ್ದಾರೆ. 

ಲಕ್ಕವಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿ ಪರಾರಿಯಾದ ಅಣ್ಣಪ್ಪನಿಗಾಗಿ ಪೊಲೀಸರು ಹುಡುಕಾಟ ಆರಂಬಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News