ರಾಜಕೀಯ ಅನುಭವವನ್ನು ಜನರ ಮುಂದಿಡುತ್ತಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ: ಶಾಸಕ ಕೆ.ಜಿ.ಬೋಪಯ್ಯ

Update: 2018-03-16 11:37 GMT

ಮಡಿಕೇರಿ, ಮಾ.16: ನನ್ನ ಜೀವನ ಚರಿತ್ರೆಯನ್ನು ಫೇಸ್‍ಬುಕ್ ಮೂಲಕ ಹಂತಹಂತವಾಗಿ ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇನೆಯೇ ಹೊರತು ಇದರಲ್ಲಿ ಸಪ್ರ್ರೈಸ್ ಏನೂ ಇಲ್ಲ ಎಂದು ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನ ಕುಗ್ರಾಮ ಕಾಲೂರಿನಿಂದ ವಿಧಾನಸೌಧವರೆಗೆ ಹೋಗಿದ್ದೇನೆ. ರಾಜಕೀಯ ಜೀವನದ ಅನುಭವವನ್ನು ಜನರ ಮುಂದಿಡುತ್ತಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡವೆಂದರು. ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೊಸ ಮುಖಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿರುವ ಬಗ್ಗೆ ಉತ್ತರಿಸಿದ ಬೋಪಯ್ಯ ರಾಜಕೀಯವಾಗಿ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಪಕ್ಷ ಸೂಚನೆ ನೀಡಿದೆ ಎಂದು ತಮ್ಮ ಇತ್ತೀಚಿನ ಫೇಸ್‍ಬುಕ್ ಅಭಿಪ್ರಾಯಗಳ ಬಗ್ಗೆ ಹಬ್ಬಿರುವ ಗಾಳಿಸುದ್ದಿಗೆ ಸ್ಪಷ್ಟನೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News