ತುಕ್ಕು ಹಿಡಿದ ಸಲಕರಣೆಗಳು!

Update: 2018-03-21 19:05 GMT

ಮಾನ್ಯರೇ,

ಮಂಗಳೂರು ನಗರದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಉದ್ಯಾನಗಳಿವೆ. ಆದರೆ ಅಲ್ಲೆಲ್ಲಾ ಮಕ್ಕಳಿಗೆ ಆಟವಾಡಲು ಬೇಕಾದ ಸೌಕರ್ಯ-ಸಲಕರಣೆಗಳಿಲ್ಲ ಹಾಗಾಗಿ ನಗರದ ಹೆಚ್ಚಿನ ಮಕ್ಕಳು ತಮ್ಮ ಪೋಷಕರೊಂದಿಗೆ ಕದ್ರಿ ಉದ್ಯಾನಕ್ಕೆ ಆಟವಾಡಲು ಹೋಗುತ್ತಾರೆ. ಆದರೆ ಇಲ್ಲಿಯೂ ಕೂಡಾ ಆಟದ ಸಲಕರಣೆಗಳ ಸರಿಯಾದ ನಿರ್ವಹಣೆಯಿಲ್ಲದೆ ಮಕ್ಕಳು ಆಟವಾಡಲು ತೊಂದರೆಯಾಗುತ್ತದೆ.

ಇಲ್ಲಿನ ಪುಟಾಣಿ ರೈಲು ಇನ್ನೂ ಓಡಾಟ ಆರಂಭಿಸಿಲ್ಲ. ಅಲ್ಲದೆ ತೂಗುಯ್ಯಲೆ, ಜಾರುಬಂಡಿಗಳು ತುಕ್ಕು ಹಿಡಿದಿವೆ. ಇಂತಹ ತುಕ್ಕು ಹಿಡಿದ ಸಲಕರಣೆಗಳಲ್ಲಿ ಆಡಿದರೆ ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಸಂಬಂಧಿತರು ಇನ್ನಾದರೂ ಇಂತಹ ಸಮಸ್ಯೆಗಳ ಬಗ್ಗೆ ಗಮನನೀಡಿ ಮಕ್ಕಳ ಸಂತೋಷಕ್ಕೆ ಕಾರಣರಾಗುವರೇ?

-ಜೆ. ಎಫ್. ಡಿ’ಸೋಜಾ, ಅತ್ತಾವರ

Writer - -ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Editor - -ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Similar News