ಕೆಂಡ ಹಾಯ್ದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ

Update: 2018-03-30 05:49 GMT

ದಾವಣಗೆರೆ, ಮಾ.30: ನಗರದ ಹಳೇಪೇಟೆಯ ವೀರಭದ್ರೇಶ್ವರ ಕೆಂಡೋತ್ಸವವು ಶುಕ್ರವಾರ ಬೆಳಗ್ಗೆ ವಿಜೃಂಭಣೆಯಿಂದ ನೆರವೇರಿತು.
ಕೆಂಡೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕುಟುಂಬ ಸಮೇತ ಭಾಗವಹಿಸಿದ್ದರು. ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಸಚಿವರು ಪೂಜಾ ವಿಧಿವಿಧಾನ ನೆರವೇರಿಸಿದರು. ಬಳಿಕ ಸಚಿವ ಮಲ್ಲಿಕಾರ್ಜುನ್ ಹಾಗೂ ಸಹೋದರ ಎಸ್.ಎಸ್.ಗಣೇಶ್ ದೇವಸ್ಥಾನದ ಮುಂಭಾಗದಲ್ಲಿದ್ದ ನಿರ್ಮಿಸಲಾಗಿದ್ದ ಕೆಂಡದ ಕುಂಡವನ್ನು ಹಾಯ್ದರು.
ಬಳಿಕ ನೂರಾರು ಮಂದಿ ಕೆಂಡ ಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News