ಕೊಳ್ಳೇಗಾಲ: ಚುನಾವಣಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ; 30 ಮಂದಿಯ ವಿರುದ್ಧ ದೂರು

Update: 2018-04-05 17:18 GMT

ಕೊಳ್ಳೇಗಾಲ,ಏ.5: ಬಿಎಸ್‍ಪಿ ಮತ್ತು ಜೆಡಿಎಸ್ ಮೈತ್ರಿ ಸಮಾವೇಶದ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಚುನಾವಣಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಸುಮಾರು 30 ಮಂದಿಯ ಮೇಲೆ ಪಟ್ಟಣ ಪೊಲೀಸ್ ಠಾಣೆಗೆ ನಗರಸಭೆ ಪೌರಾಯುಕ್ತ ಡಿ.ಕೆ.ಲಿಂಗರಾಜು ದೂರು ನೀಡಿದ್ದಾರೆ.

ಚುನಾವಣಾಧಿಕಾರಿಗಳಾದ ನಗರಸಭೆ ಆಯುಕ್ತ ಡಿ.ಕೆ.ಲಿಂಗರಾಜು ಮತ್ತು ಮ.ಮ.ಬೆಟ್ಟ ಪಿಡಬ್ಲ್ಯೂ ಎಇಇ ಹೆಚ್.ಕುಮಾರ್ ಅವರು ಏ.3 ರಂದು ನಡೆದ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿಯ ಸಮಾವೇಶಕ್ಕೆ ತೆರಳಿದ್ದ ವೇಳೆ ಕಾರ್ಯಕ್ರಮದಲ್ಲಿ ಸುಮಾರು 30 ಮಂದಿ ಜನರು ಅಧಿಕಾರಿಗಳನ್ನು 'ಇಲ್ಲಿಗೆ ಏಕೆ ಆಗಮಿಸಿದ್ದೀರಿ' ಎಂದು ಸುತ್ತವರಿದು ಅವ್ಯಾಚ್ಯ ಪದಗಳಿಂದ ನಿಂದಿಸಿ ಅವಮಾನ ಪಡಿಸಿದಲ್ಲದೆ ಪ್ರಾಣ ಬೆದರಿಕೆ ಹಾಕಿರುವುದಾಗಿ ಠಾಣೆಗೆ ಚುನಾವಣಾಧಿಕಾರಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಿಎಸ್‍ಐ ವೀಣಾನಾಯಕ್ ಮುಂದಿನ ಕ್ರಮ ಕೈಗೊಂಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News