ಕಡೂರು ವಿಧಾನ ಸಭೆ ಚುವಾಣೆಗೆ ಅಭ್ಯರ್ಥಿ ಆಯ್ಕೆ: ಕಾಂಗ್ರೆಸ್ ಮುಖಂಡರು ರಾಜೀನಾಮೆ
Update: 2018-04-21 08:20 GMT
ಚಿಕ್ಕಮಗಳೂರು, ಎ. 21: ಕಡೂರು ವಿಧಾನ ಸಭೆ ಚುವಾಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೊಂಡಿದ್ದು, ಇದರಿಂದ ಅಸಮದಾನಗೊಂಡ ಪಕ್ಷದ ಸುಮಾರು 20 ಕ್ಕೂ ಹೆಚ್ಚು ಮುಖಂಡರು ಶುಕ್ರವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ನಿಂದ ಅಭ್ಯರ್ಥಿ ಆನಂದ ಆಯ್ಕೆಗೊಂಡಿದ್ದು, ಇದು ಹಲವರಿಗೆ ಅಸಮದಾನ ಉಂಟಾಗಿ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ರಾಜೀನಾಮೆ ಪತ್ರವನ್ನ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಹಾಗೂ ವೇಣುಗೋಪಾಲರಿಗೆ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅವರು ಶುಕ್ರವಾರ ಸಂಜೆ ಮೇಲ್ ಮೂಲಕ ರಾಜೀನಾಮೆ ನೀಡಿದ್ದು, ಜಿ.ಪಂ.ಸದಸ್ಯರು, ತಾಲೂಕ ಅಧ್ಯಕ್ಷರು, ಕಿಸಾನ್ ಘಟಕದ ಸದಸ್ಯರು ರಾಜೀನಾಮೆ ನೀಡಿರುವುದಾಗಿ ಮಾಹಿತಿ ದೊರಕಿದೆ.