ಜಗಳೂರು ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ತೆರೆ: ಶಾಸಕ ಎಚ್.ಪಿ. ರಾಜೇಶ್ ಗೆ ಬಿ-ಫಾರಂ
Update: 2018-04-22 13:00 GMT
ದಾವಣಗೆರೆ,ಎ.21: ಹಾಲಿ ಶಾಸಕರಾಗಿದ್ದ ಎಚ್.ಪಿ. ರಾಜೇಶ್ಗೆ ಟಿಕೆಟ್ ತಪ್ಪಿಸಿ ಪುಷ್ಪಾ ಲಕ್ಷ್ಮಣಸ್ವಾಮಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಜಗಳೂರಿನಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದ್ದು, ಶತಾಯಗತಾಯವಾಗಿ ಎಚ್.ಪಿ. ರಾಜೇಶ್ ಬಿ-ಫಾರಂ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಐದಾರು ದಿನಗಳಿಂದ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದ ಎಚ್.ಪಿ. ರಾಜೇಶ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತಿತರರಿಂದ ನಿರಂತರವಾಗಿ ಹೈಕಮಾಂಡ್, ವರಿಷ್ಟರ ಮೇಲೆ ಒತ್ತಡ ತಂದ ಪರಿಣಾಮ ಭಾನುವಾರ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಬಿಫಾರಂ ನೀಡಿದರು.
ಎ. 23 ರಂದು ಎಚ್.ಪಿ. ರಾಜೇಶ್ ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನು, ಟಿಕೆಟ್ ಪಡೆದು ಬಿಫಾರಂ ವಂಚಿತರಾದ ಪುಷ್ಪಾ ಲಕ್ಷ್ಮಣಸ್ವಾಮಿ ಬಂಡಾಯವೇಳುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.