ಮಂಡ್ಯ: ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು

Update: 2018-04-23 16:26 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಎ.23: ಪಾಂಡವಪುರ ತಾಲೂಕಿನ ತೊಣ್ಣೂರುಕೆರೆಯಲ್ಲಿ ಈಜಾಡುತ್ತಿದ್ದ ಇಬ್ಬರು ಯುವಕರು ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ಬೆಂಗಳೂರಿನ ಟ್ಯಾನಿ ರಸ್ತೆ ನಿವಾಸಿಗಳಾದ ನಿವಾಸಿಗಳಾದ ಮುಹಮ್ಮದ್ ಜುಬೇರ್ (17) ಹಾಗೂ ಮುಹಮ್ಮದ್ ರೆಹಮಾನ್ (16) ಎಂಬುವರೇ ಮೃತಪಟ್ಟ ಯುವಕರು.

ಮುಹಮ್ಮದ್ ಸೈಫ್ ಹಾಗೂ ಮುಹಮ್ಮದ್ ಸಲ್ಮಾನ್ ಅವರು ತಮ್ಮ ಸಹೋದರರ ಮಕ್ಕಳಾದ ಮುಹಮ್ಮದ್ ಜುಬೇರ್ ಹಾಗೂ ಮುಹಮ್ಮದ್ ರೆಹಮಾನ್ ಅವರೊಂದಿಗೆ ಕೆರೆತೊಣ್ಣೂರಿನಲ್ಲಿರುವ ದರ್ಗಾಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ.

ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ನುರಿತ ಈಜುಗಾರರಿಂದ ಶವಗಳನ್ನು ಹೊರಗೆತೆದರು. ಈ ಸಂಬಂಧ ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂತ್ವನ: ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಹಾಗೂ ಜಿಪಂ ಸದಸ್ಯ ಸಿ.ಅಶೋಕ್ ಮೃತ ಯುವಕರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News