ಕಳಸ ಪಿಎಸ್ಸೈ ಹೃದಯಘಾತದಿಂದ ನಿಧನ

Update: 2018-04-24 07:12 GMT

ಚಿಕ್ಕಮಗಳೂರು, ಎ.24: ಮೂಡಿಗೆರೆ ತಾಲೂಕಿನ ಕಳಸ ಪೊಲೀಸ್ ಠಾಣೆಯ ಪಿಎಸ್ಸೈ ಪ್ರಸಾದ್ ಡಿ. ಕವಾರಿ( 33) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಉತ್ತರ ಕನ್ನಡದ ಗೋಕರ್ಣ ಮೂಲದವರಾಗಿದ್ದ ಪ್ರಸಾದ್ ಡಿ. ಕವಾರಿ ಚುನಾವಣೆಯ ಹಿನ್ನೆಲೆಯಲ್ಲಿ ಕಳಸ ಠಾಣೆಗೆ ವರ್ಗಾವಣೆಯಾಗಿದ್ದರು. ಅವರು ಕಳಸ ಪಟ್ಟಣದಲ್ಲಿ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News