ಕಬಿನಿ ಹಿನ್ನೀರಿನಲ್ಲಿ ಮುಳುಗಿ ತಂದೆ, ಇಬ್ಬರು ಮಕ್ಕಳು ಮೃತ್ಯು

Update: 2018-04-26 05:03 GMT
ಸಾಂದರ್ಭಿಕ ಚಿತ್ರ

ಮೈಸೂರು, ಎ.26: ಕಬಿನಿ ಹಿನ್ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮುಳುಗಿ ಮೃತಪಟ್ಟ ದಾರುಣ ಘಟನೆ ಎಚ್.ಡಿ.ಕೋಟೆ ತಾಲೂಕಿನ ಕೇರಳದ ಗಡಿಭಾಗವಾದ ಗೋಳೂರು ಎಂಬಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಮೃತರನ್ನು ಕೇರಳದ ಕಬಿನಿಗಿರಿ ನಿವಾಸಿಗಳಾದ ಚಾಲಕ್ಕಲ್ ಬೇಬಿ(53), ಅವರ ಪುತ್ರ ಅಜಿತ್(24) ಹಾಗೂ ಪುತ್ರಿ ಅನಿತಾ(18) ಎಂದು ಗುರುತಿಸಲಾಗಿದೆ.
ಅನಿತಾ ಕಬಿನಿ ಹಿನ್ನೀರಿನಲ್ಲಿ ಸ್ನಾನಕ್ಕಿಳಿದ ವೇಳೆ ಈ ದುರಂತ ಸಂಭವಿಸಿದೆ. ಸ್ನಾನಕ್ಕಿಳಿದ ಅನಿತಾ ಆಕಸ್ಮಿಕವಾಗಿ ನೀರಲ್ಲಿ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ತೆರಳಿದ ಆಕೆಯ ತಂದೆ ಚಾಲಕ್ಕಲ್ ಬೇಬಿ ಕೂಡಾ ಅಪಾಯದಲ್ಲಿ ಸಿಲುಕಿದ್ದಾರೆ. ಈ ವೇಳೆ ಅವರಿಬ್ಬರ ರಕ್ಷಣೆಗೆ ಮುಂದಾದ ಅಜಿತ್ ಕೂಡಾ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟರೆನ್ನಲಾಗಿದೆ.

ಈ ಬಗ್ಗೆ ಕೇರಳದ ಪುಳ್ಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News