ಹುಸೈನ್ ಕೋಡಿಮಜಲು
Update: 2018-04-26 13:51 GMT
ಬೆಳ್ತಂಗಡಿ, ಎ.26: ವೇಣೂರು ಸಮೀಪ ಕುಕ್ಕೇಡಿ ಉಳ್ತೂರು ನಿವಾಸಿ ಹಾಜಿ ಹಸೈನಾರ್ ಕೋಡಿಮಜಲು (73) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಉಳ್ತೂರು ಮಸೀದಿಯ ಅಧ್ಯಕ್ಷರಾಗಿ ಎಸ್ಎಂಎ ಸಂಸ್ಥೆಯ ವೇಣೂರು ಅಧ್ಯಕ್ಷರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.