ಮಡಿಕೇರಿ: ಬಿಜೆಪಿ ಮುಖಂಡನ ಮನೆ ಮೇಲೆ ಗುಂಡಿನ ದಾಳಿ

Update: 2018-04-28 13:40 GMT

ಮಡಿಕೇರಿ,ಎ.28: ದಕ್ಷಿಣ ಕೊಡಗಿನ ಪೊನ್ನಂಪೇಟೆ ಬಳಿಯ ಗ್ರಾಮವೊಂದರಲ್ಲಿನ ಬಿಜೆಪಿ ಮುಖಂಡರೊಬ್ಬರ ಮನೆಯ ಮೇಲೆ ದುಷ್ಕರ್ಮಿಗಳು ನಡು ರಾತ್ರಿಯಲ್ಲಿ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.

ಪೊನ್ನಂಪೇಟೆ ಬಳಿಯ ಚೀನಿವಾಡ ಗ್ರಾಮದಲ್ಲಿ ವಿರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾದ ಜಂಟಿ ಕಾರ್ಯದರ್ಶಿ ಬೊಳ್ಳೆಯಂಗಡ ದಾದು ಪೂವಯ್ಯ ವಾಸವಿದ್ದು, ಇವರ ಮನೆಯ ಮೇಲೆ ಶುಕ್ರವಾರ ನಡುರಾತ್ರಿ ಗುಂಡಿನ ದಾಳಿ ನಡೆದಿದೆ. ಇದರಿಂದ ಮನೆಯ ಕಿಟಕಿಯ ಗಾಜುಗಳು ಒಡೆದು ಹಾನಿಯುಂಟಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. 

ರಾಜಕೀಯ ಪಕ್ಷದ ಪ್ರಮುಖನ ಮನೆಯ ಮೇಲೆ ನಡೆದಿರುವ ಗುಂಡಿನ ದಾಳಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊನ್ನಂಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News