ಮಡಿಕೇರಿ: ಆಲೇಕಟ್ಟೆ ರಸ್ತೆ ಅವ್ಯವಸ್ಥೆ; ಸೂಕ್ತ ಚರಂಡಿ ವ್ಯವಸ್ಥೆಗೆ ಸ್ಥಳೀಯರ ಆಗ್ರಹ

Update: 2018-05-26 11:40 GMT

ಮಡಿಕೇರಿ,ಮೇ.26: ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಲೋಕೋಪಯೋಗಿ ಇಲಾಖೆಗೆ ಒಳಪಡುವ ಸೋಮವಾರಪೇಟೆ-ಶಾಂತಳ್ಳಿ ಮುಖ್ಯ ರಸ್ತೆಯ ಆಲೇಕಟ್ಟೆಯಲ್ಲಿ ಮಳೆ ನೀರು ನಿಲುಗಡೆಯಾಗುತ್ತಿದ್ದು, ಸಂಚಾರಕ್ಕೆ ತೀವ್ರ ತೊಡಕಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆಲೇಕಟ್ಟೆ ರಸ್ತೆಯ ಪದ್ಮಕ್ಯಾಂಟೀನ್ ಬಳಿಯಲ್ಲಿರುವ ಹಳೆ ಬಾವಿ ಮುಂಭಾಗ ಮಳೆ ನೀರಿನೊಂದಿಗೆ ಭಾರೀ ಪ್ರಮಾಣದ ಕೊಳಚೆ ನೀರು ಶೇಖರಣೆಗೊಳ್ಳುತ್ತಿದ್ದು, ಸ್ಥಳೀಯ ನಿವಾಸಿಗಳೊಂದಿಗೆ ವಾಹನ ಸವಾರರಿಗೂ ತೊಂದರೆ ಎದುರಾಗಿದೆ.

ಈ ಬಗ್ಗೆ ಲೋಕೋಪಯೋಗಿ ಇಲಾಖಾ ಅಭಿಯಂತರರು ಹಾಗೂ ಚೌಡ್ಲು ಗ್ರಾ.ಪಂ. ಆಡಳಿತ ಮಂಡಳಿ ತಕ್ಷಣ ಗಮನ ಹರಿಸಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News