ಹೊನ್ನಾಳಿ; ಸಾಲ ಬಾಧೆ : ರೈತ ಆತ್ಮಹತ್ಯೆ

Update: 2018-06-04 14:33 GMT

ಹೊನ್ನಾಳಿ,ಜೂ.4 : ಸಾಲ ಬಾಧೆ, ಬೆಳೆ ಹಾನಿಯಿಂದ ಬೇಸತ್ತ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೀಲೂರು ಸಮೀಪದ ಕೆಂಗಟ್ಟೆ ಗ್ರಾಮದಲ್ಲಿ ಸಂಭವಿಸಿದೆ.

ಕೆಂಗಟ್ಟೆ ಗ್ರಾಮದ ರೈತ ನಾಗರಾಜನಾಯ್ಕ್(45) ಆತ್ಮಹತ್ಯೆ ಮಾಡಿಕೊಂಡಿರುವ ರೈತ. 

ನಾಗರಾಜನಾಯ್ಕ್ 2.5 ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆ ಮಳೆ ಕೊರತೆಯಿಂದ ಹಾಳಾಗಿತ್ತು. ಸತತ ಮೂರು ಹಂಗಾಮಿನ ಬೆಳೆಯೂ ನಾಶವಾಗುವ ಮೂಲಕ ತೀವ್ರ ಸಾಲದ ಸುಳಿಯಲ್ಲಿ ಸಿಲುಕಿದ್ದರು. ಬ್ಯಾಂಕ್‍ನಲ್ಲಿ 20 ಸಾವಿರ ರೂ..ಗಳಷ್ಟು ಬೆಳೆ ಸಾಲ, ಖಾಸಗಿಯಾಗಿ 6 ಲಕ್ಷ ರೂ. ಗಳಷ್ಟು ಸಾಲ ಮಾಡಿಕೊಂಡಿದ್ದರು. ಈ ಕುರಿತು ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News