ಪ್ರಧಾನಿ ಮೋದಿಗೆ 9 ಪೈಸೆಯ ಚೆಕ್ ಕಳುಹಿಸಿದ ವ್ಯಕ್ತಿ!

Update: 2018-06-05 09:53 GMT

ತೆಲಂಗಾಣ, ಜೂ.5: ತೈಲ ಬೆಲೆಯಲ್ಲಿ ಕೇವಲ 9 ಪೈಸೆ ಇಳಿಕೆಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ತೆಲಂಗಾಣದ ರಾಜನ್ನಾ ಸಿರ್ಸಿಲ್ಲಾ ಜಿಲ್ಲೆಯ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ 9 ಪೈಸೆಯ ಚೆಕ್ ಕಳುಹಿಸಿದ್ದಾರೆ.

ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕೇವಲ 9 ಪೈಸೆ ಕಡಿತಗೊಂಡ ನಂತರ ಚಂದು ಗೌಡ್ ಎಂಬವರು ಪ್ರಧಾನಿಗೆ ಈ ಚೆಕ್ ಕಳುಹಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಸ್ಕರ್ ರಿಗೆ ಚೆಕ್ ಹಸ್ತಾಂತರಿಸಿದ ಚಂದು ಪ್ರಧಾನಿ ಮೋದಿಯ ಪರಿಹಾರ ನಿಧಿಗೆ ಚೆಕ್ ಅನ್ನು ತಲುಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಹೊಸ ಬೆಳೆಗಾಗಿ ಸಿದ್ಧತೆ ನಡೆಸುತ್ತಿದ್ದ ರಾಜ್ಯದ ರೈತರಿಗೆ ಇಂಧನ ಬೆಲೆಯೇರಿಕೆ ಭಾರೀ ಹೊಡೆತ ನೀಡಿತ್ತು. ಟ್ರ್ಯಾಕ್ಟರ್ ಹಾಗು ಕೃಷಿ ಸಲಕರಣೆಗಳಿಗೆ ಅಗತ್ಯವಾದ ತೈಲ ಬೆಲೆ ಗಗನಕ್ಕೇರಿದ್ದರಿಂದ ರೈತರು ಆಕ್ರೋಶಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News