ಮೈಸೂರು: ಯುವಕನ ಕೊಲೆ ಪ್ರಕರಣ; ಇಬ್ಬರ ಬಂಧನ

Update: 2018-06-07 16:57 GMT

ಮೈಸೂರು,ಜೂ.2: ನಗರದ ಕೆ.ಆರ್.ಆಸ್ಪತ್ರೆ ಬಳಿ ನಡೆದ ಕೊಲೆ ಪ್ರಕರಣವೊಂದಕ್ಕೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮೈಸೂರಿನ ಕೆ.ಆರ್ ಆಸ್ಪತ್ರೆಯ ಇಂದಿರಾ ಕ್ಯಾಂಟೀನ್ ಬಳಿ ದುಷ್ಕರ್ಮಿಗಳು 25 ವರ್ಷದ ಯುವಕನನ್ನು ಕೊಲೆಗೈದಿರುವ ಘಟನೆ ಮೇ.10 ರಂದು ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ದೇವರಾಜ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ.

ಬಂಧಿತರನ್ನು ಕೆ.ಆರ್.ಆಸ್ಪತ್ರೆಯ ಬಳಿ ಇರುವ ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ಮೈಸೂರಿನವರೇ ಆದ ಶಶಿ ಮತ್ತು ಪ್ರೇಂಕುಮಾರ್ ಎಂದು ಹೇಳಲಾಗಿದೆ. ಮತ್ತಿಬ್ಬರು ಪಾಲಿಕೆಯಯಲ್ಲಿ ಗುತ್ತಿಗೆ ಆಧಾರದ ಮಾಲೆ ಕೆಲಸ ಮಾಡುವ ನವೀನ್ ಮತ್ತು ರಂಗ ಎಂಬವರಾಗಿದ್ದು, ಅವರು ಪರಾರಿಯಾಗಿದ್ದಾರೆ. ದೇವರಾಜ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆಯ ಹಿನ್ನೆಲೆ: ಮೇ.10ರಂದು ಸುಭಾಷ್ ನಗರದ ನಿವಾಸಿ ಮುಹಮದ್ ಫೈರೋಝ್ ಅವರ ಮಗನಾಗಿದ್ದ ಗೂಡ್ಸ್ ಆಟೋ ಡ್ರೈವರ್ ಮುಹಮ್ಮದ್ ಇರ್ಫಾನ್ ನನ್ನು, ಕೆ.ಆರ್ ಆಸ್ಪತ್ರೆ ಬಳಿಯ ಇಂದಿರಾ ಕ್ಯಾಂಟಿನ್ ಬಳಿ ಪಿಕ್ ಪಾಕೆಟ್ ಮಾಡಿದನೆಂಬ ಆರೋಪದಡಿ ಕೈಕಾಲು ಕಟ್ಟಿ ಹೊಡೆದು ಕೊಲೆ  ಮಾಡಿದ್ದರು. ಸಾರ್ವಜನಿಕರು ಮೇ.11ರಂದು ಬೆಳಿಗ್ಗೆ ಮೃತ ದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕಾಗಮಿಸಿದ ದೇವರಾಜ ಠಾಣಾ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಪೊಲೀಸರು ಪ್ರಕರಣಕ್ಕೆ ಸಂಬಂಧಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News