ಹುಬ್ಬಳ್ಳಿ: ತಂಡಗಳ ಮಧ್ಯೆ ಹೊಡೆದಾಟ; ಇಬ್ಬರು ಯುವಕರ ಹತ್ಯೆ

Update: 2018-06-08 07:16 GMT

ಹುಬ್ಬಳ್ಳಿ, ಜೂ. 8: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ತಂಡಗಳು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಕಾರಣ ಯುವಕರಿಬ್ಬರು ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಗರದ ಅಜಂತಾ ಹೊಟೇಲ್ ಬಳಿ ನಡೆದಿದೆ.

ಮಂಟೂರ ರಸ್ತೆ ನಿವಾಸಿಗಳಾದ ರಿಯಾಝ್ ಸವಣೂರ (23) ಹಾಗೂ ಫಿರೋಝ್ ಹನಸಿ (23) ಮೃತರು ಎಂದು ಗುರುತಿಸಲಾಗಿದೆ.

ಅವರಿಬ್ಬರು ಸ್ನೇಹಿತರಾಗಿದ್ದು, ನಿನ್ನೆ ತಡರಾತ್ರಿ ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದುಕೊಂಡ ಪರಿಣಾಮ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಹಳೇ ದ್ವೇಷ, ಗೆಳೆಯರ ನಡುವೆ ಗಲಾಟೆ ಕಾರಣ ಎಂದು ತಿಳಿದು ಬಂದಿದೆ. 

ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News