ಹನೂರು : ಶಾಸಕ ಆರ್ ನರೇಂದ್ರರಿಗೆ ಅಭಿನಂದನಾ ಸಮಾರಂಭ

Update: 2018-06-17 16:08 GMT

ಹನೂರು,ಜೂ.17 : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲು ಸಚಿವ ಸ್ಥಾನ ಅಲಂಕರಿಸಿದವರು ಎರಡು ವರ್ಷ ತದನಂತರ ಸಚಿವ ಸ್ಥಾನ ಅಲಂಕರಿಸುವವರು ಮೂರು ವರ್ಷ ಅಧಿಕಾರ ನೆಡಸಬೇಕೆಂದು ಸಮನ್ವಯ ಸಮಿತಿ ಅದ್ಯಕ್ಷರಾದ ಸಿದ್ದರಾಮಯ್ಯರವರು ಸಭೆಯಲ್ಲಿ ತಿರ್ಮಾನಿಸಿದ್ದು ಅದರಂತೆ ಎರಡು ವರ್ಷದ ನಂತರ ಹನೂರು ಕ್ಷೇತ್ರದ ಶಾಸಕ ಆರ್ ನರೇಂದ್ರರಾಜೂ ಗೌಡರಿಗೆ ಮಂತ್ರಿಗಿರಿ ಒಲಿಯಲಿದೆ ಎಂದು ಸಂಸದ ಆರ್ ದ್ರುವನಾರಯಣ್ ಎಂದು ತಿಳಿಸಿದರು .

ಪಟ್ಟಣದ ಎಪಿಎಂಸಿ ಆವರಣದಲ್ಲಿ  ಹನೂರು -ರಾಮಾಪುರ  ಬ್ಲಾಕ್ ಕಾಂಗ್ರೇಸ್  ಸಮಿತಿ ವತಿಯಿಂದ ಆಯೋಜಿಸಿದ್ದ ಹ್ಯಾಟ್ರಿಕ್ ಗೆಲುವಿನ ಶಾಸಕ ಆರ್ ನರೇಂದ್ರಗೆ ಅಭಿನಂದನಾ ಸಮಾರಂಭ ಮತ್ತು ಮತದಾರರಿಗೆ ಕೃತಜ್ಞತೆ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು 80 ಸ್ಥಾನಗಳಿಸಿದರೂ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಜಾತ್ಯತೀತಾ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೂಂಡು ಮೈತ್ರಿ ಸರ್ಕಾರ ರಚನೆಮಾಡಿದ್ದು, ನಮ್ಮ  ಪಕ್ಷವು ಸಾಮಾಜಿಕ ನ್ಯಾಯದಡಿ ಈಗಾಗಲೇ ಸಚಿವ ಸ್ಥಾನಗಳನ್ನು ನೀಡಲಾಗಿದ್ದು, ಸಮನ್ವಯ ಸಮಿತಿ ಅದ್ಯಕ್ಷರಾದ ಸಿದ್ದರಾಮಯ್ಯರವರು ಸಭೆಯಲ್ಲಿ ತಿರ್ಮಾನಿಸಿದಂತೆ ಸಮ್ಮಿಶ್ರ ಸರ್ಕಾರವು ಎರಡು ವರ್ಷ ತುಂಬಿದ ನಂತರ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಲು ಮನ್ನಣೆ ನೀಡಲಾಗುವುದು, ಅ ಸಮಯದಲ್ಲಿ ಹನೂರು ಕ್ಷೇತ್ರಕ್ಕೂ ಸಚಿವ ಸ್ಥಾನಕ್ಕೂ ನೀಡಲಾಗುವುದು. ಕ್ಷೇತ್ರದ ಜನತೆ ದೃತಿಗೆಡದೆ ಮುಂದೆ ಬರುವ ಎಲ್ಲಾ ಚುನಾವಣೆಗೂ ಇಂದಿನಿಂದ ಪಕ್ಷ ಸಂಘಟನೆ ಮಾಡಲು ಕಾರ್ಯಕರ್ತರಿಗೆ ಕರೆ ನೀಡಿದರು.

ಪ್ರದಾನಿ ನರೇಂದ್ರ ಮೋದಿ ಅಭಿವೃದ್ದಿ ಶೂನ್ಯ : ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಕಳೆದಿದೆ,  ಅವರು ಮನಸ್ಸು ಮಾಡಿದ್ದರೆ ರೈತ ಸಾಲಗಳನ್ನು ಮನ್ನಾ ಮಾಡಬಹದು. ಆದರೆ ರೈತಪರ, ಬಡವರ ಪರ  ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರದೆ ಕೇವಲ ವಿದೇಶ ಪ್ರವಾಸಗಳಲ್ಲಿ ಕಾಲಹರಣಮಾಡುತ್ತಿದ್ದು ನಾಚಿಕಗೇಡಿನ ಸಂಗತಿ ಎಂದು ಕಿಡಿಕಾರಿದರು.

ಶಾಸಕ ಆರ್ ನರೇಂದ್ರರಾಜೂಗೌಡ ಮಾತನಡಿ, ಇತಿಹಾಸದಲ್ಲಿ  ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗೆ ದುಡಿದಂತಹ ಮಹಾನ್ ನಾಯಕರಲ್ಲಿ ಮೊದಲನೆಯವರು ದೇವರಾಜು ಅರಸು, ನಂತರ ಸ್ಥಾನವನ್ನು ಸಿದ್ದರಾಮಯ್ಯನವರು ಅಲಂಕರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಅದ್ಯಕ್ಷೆ ಶಿವಮ್ಮ, ಚಾಮುಲ್ ಅದ್ಯಕ್ಷ ಗುರುಮಲ್ಲಪ್ಪ, ಜಿಪಂ ಸದಸ್ಯರಾದ ಬಸವರಾಜು, ಮರಗದಮಣಿ, ಜಿ ಕಾ ಅದ್ಯಕ್ಷ ಮರಿಸ್ವಾಮಿ, ತಾಪಂ ಅಧ್ಯಕ್ಷರಾದ ರಾಜು , ಸ್ಥಾಯಿಸಮಿತಿ ಅದ್ಯಕ್ಷ ಜಾವದ್ ಅಹಮದ್ ಪಪಂ ಅದ್ಯಕ್ಷೆ ಮಮತಾಮಹದೇವ ,ಸದಸ್ಯ ರಾಜೂಗೌಡ  ಎಸ್ ಡಿ ಮೋರ್ಚಾ ಅದ್ಯಕ್ಷ ಕೃಷ್ಣ , ಹನೂರು ಯೂತ್ ಅದ್ಯಕ್ಷ ರಾಯಿಲ್  ಕಾರ್ಯದರ್ಶಿ ಮಾದೇಶ್ ಹನೂರು ಟೌನ್ ಯುವ ಕಾಂಗ್ರೇಸ್ ಅದ್ಯಕ್ಷ ಸತೀಶ್ ಮುಖಂಡರಾದ ಮಹಾದೇಶ್ , ಚಿಕ್ಕತಮಯ್ಯಗೌಡ , ಪಾಳ್ಯಮಂಜು ಸಿದ್ದಪ್ಪಾಜಿ (ಪಾಳ್ಯ) ಇನ್ನಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News