ಮುಂಡಗೋಡ: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತ್ಯು

Update: 2018-06-26 11:48 GMT

ಮುಂಡಗೋಡ,ಜೂ.26: ಮುಂಡಗೋಡ ಉಪವಿಭಾಗದ ಕಾತೂರ ವಲಯ ಅರಣ್ಯ ಕಚೇರಿಯಲ್ಲಿ ಕ್ಷೇಮಾಭಿವೃದ್ದಿ ನೌಕರನಾಗಿ ಕಾರ್ಯನಿರ್ವಹಿಸಿ ಇತ್ತೀಚಿಗೆ ನಿವೃತ್ತಿ ಹೊಂದಿದ್ದ ಎ.ಎಸ್ ಕಾರವಾರಿ(60) ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ.

ಭಾನುವಾರ ಬೆಳಗ್ಗೆ ಮುಂಡಗೋಡದಿಂದ ಕಲಘಟಗಿಗೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಬಮ್ಮಿಗಟ್ಟಿ ಹತ್ತಿರ ಬೊಲೇರೊ ವಾಹನ ಢಿಕ್ಕಿ ಹೊಡೆದು ಎ.ಎಸ್.ಕಾರವಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೊಲೇರೋ ಚಾಲಕನನ್ನು ರವಿ ಎಂದು ಹೇಳಲಾಗಿದೆ. ಕಾರವಾರಿಯವರು ನಿವೃತ್ತಿಯಾದ ನಂತರ ಕಲಘಟಗಿಯ ಕಳ್ಳಿಓಣಿಯ ನಿವಾಸಿಯಾಗಿದ್ದರು ಎಂದು ತಿಳಿದುಬಂದಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News