ಹನೂರು: ಜಮೀನಿಗೆ ನುಗ್ಗಿ ಆತಂಕ ಸೃಷ್ಟಿಸಿದ ಕಾಡಾನೆ

Update: 2018-06-26 11:54 GMT

ಹನೂರು,ಜೂ.26: ಆಹಾರವನ್ನು ಹುಡುಕಿ ಕಾಡಿನಿಂದ ನಾಡಿಗೆ ಬಂದ ಎರಡು ಆನೆಗಳು ಮಂಗಳವಾರ ದೊಮ್ಮಗದ್ದೆ ಗ್ರಾಮದ  ಸಮೀಪ ನಂಜಪ್ಪ ಎಂಬವರ ಜಮೀನಿಗೆ ನುಗ್ಗಿದ್ದು, ಸ್ಥಳೀಯ ಗ್ರಾಮಸ್ಥರಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತು.

ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಹನೂರು ಬಫರ್ ವಲಯ ಮತ್ತು ಎಲ್ಲೆಮಾಳ ಗಸ್ತು ಕಾವೇರಿ ವನ್ಯ ಜೀವಿ ವಲಯ, ಕೌದಳ್ಳಿ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಯನ್ನು ಆರಣ್ಯಕ್ಕೆ ಮರಳಿ ಕಳುಹಿಸುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News