ಗುಂಡ್ಲುಪೇಟೆ: ವೃದ್ದೆಯ ಮೇಲೆ ಕಾಡುಹಂದಿ ದಾಳಿ
Update: 2018-06-26 13:40 GMT
ಗುಂಡ್ಲುಪೇಟೆ,ಜೂ.26: ಮುಂಜಾನೆ ಬಹಿರ್ದೆಸೆಗೆ ಮನೆಯಿಂದ ಹೊರಬಂದ ವೃದ್ದೆಯ ಮೇಲೆ ಕಾಡುಹಂದಿ ದಾಳಿ ನಡೆಸಿದ ಪರಿಣಾಮ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಬಂಡೀಪುರ ಕಾಡಂಚಿನ ಮಂಗಲ ಗ್ರಾಮದ ರಾಚಮ್ಮ(72) ಮುಂಜಾನೆ ಮನೆಯಿಂದ ಹೊರಬಂದಾಗ ಹಂದಿದಾಳಿ ನಡೆಸಿದೆ. ಜೋರಾಗಿ ಕೂಗಿಕೊಂಡಾಗ ಅಕ್ಕಪಕ್ಕದವರು ಹಾಗೂ ಮನೆಯವರು ಹೊರಬಂದು ಹಂದಿಯನ್ನು ಓಡಿಸಿದ್ದಾರೆ. ಘಟನೆಯಲ್ಲಿ ಬಲಗೈ ಹಾಗೂ ಕಾಲಿಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.