ವೀರ ಯೋಧರ ತ್ಯಾಗ ಹಾಗು ರಕ್ತ ಮತ ಗಳಿಕೆಯ ಸಾಧನವಲ್ಲ
Update: 2018-06-28 08:03 GMT
ಹೊಸದಿಲ್ಲಿ, ಜೂ.28: ದೇಶದ ವೀರ ಯೋಧರ ತ್ಯಾಗ ಹಾಗು ರಕ್ತ ಮತ ಗಳಿಕೆಯ ಸಾಧನವಲ್ಲ ಎಂದು ಕಾಂಗ್ರೆಸ್ ಕೇಂದ್ರ ಸರಕಾರವನ್ನು ಟೀಕಿಸಿದೆ. 2016ರ ಸೆಪ್ಟಂಬರ್ ನಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಿಡುಗಡೆಗೊಂಡ ನಂತರ ಕಾಂಗ್ರೆಸ್ ನ ಹೇಳಿಕೆ ಹೊರಬಿದ್ದಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲಾ, ಒಂದೆಡೆ ಸೈನಿಕರ ತ್ಯಾಗ ಹಾಗು ಪರಾಕ್ರಮದ ಲಾಭವನ್ನು ಬಳಸಿಕೊಳ್ಳುತ್ತಿರುವ ಮೋದಿ ಸರಕಾರ ಮತ್ತೊಂದೆಡೆ ಪಾಕಿಸ್ತಾನವನ್ನು ಎದುರಿಸುವುದರ ಬಗ್ಗೆ ನಿರ್ದೇಶನ ನೀಡುವುದರಲ್ಲಿ ವಿಫಲವಾಗಿದೆ ಎಂದರು.
"ಒಂದೆಡೆ ಮೋದಿ ಸರಕಾರ ಸರ್ಜಿಕಲ್ ಸ್ಟ್ರೈಕ್ ಹಾಗು ನಮ್ಮ ಸೈನಿಕರ ತ್ಯಾಗಗಳ ಲಾಭ ಪಡೆಯುತ್ತಿದ್ದರೆ, ಪಾಕಿಸ್ತಾನವನ್ನು ಎದುರಿಸಲು ನಿರ್ದೇಶನ ನೀಡುವಲ್ಲಿ ಹಾಗು ಪಾಕ್ ಪ್ರಾಯೋಜಿತ ಭಯೋತ್ಪಾದನೆಗೆ ಚೆಕ್ ಮೇಟ್ ನೀಡುವ ಬಗ್ಗೆ ನಿರ್ದೇಶನ ನೀಡಲು ಸಂಪೂರ್ಣ ವಿಫಲವಾಗಿದೆ" ಎಂದು ಸುರ್ಜೇವಾಲ ಹೇಳಿದರು.