ಕೊಲೆ ಪ್ರಕರಣ: ಪತ್ನಿ ಹಂತಕನಿಗೆ 11 ದಿನಗಳಲ್ಲಿ ಜೀವಾವಧಿ ಶಿಕ್ಷೆ
Update: 2018-07-07 14:47 GMT
ಚಿತ್ರದುರ್ಗ, ಜು.6: ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದ ವಿಚಾರಣೆಯನ್ನು 11 ದಿನಗಳಲ್ಲಿ ಪೂರ್ಣಗೊಳಿಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಅಪರಾಧಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ಆದೇಶ ನೀಡಿದೆ.
ಚಳ್ಳಕೆರೆ ತಾಲೂಕಿನ ವಲಸೆ ಗ್ರಾಮದ ಪರಮೇಶ್ವರಪ್ಪ ಸ್ವಾಮಿ (75) ಶಿಕ್ಷೆಗೆ ಗುರಿಯಾದವರು. ಪತ್ನಿ ಪುಟ್ಟಮ್ಮ (63)ರನ್ನು ಜೂ.27ರಂದು ಶೀಲ ಶಂಕಿಸಿ ಹತ್ಯೆ ಮಾಡಿದ್ದನು.
ಈ ದಾಖಲೆಯ ಆದೇಶವನ್ನು ನ್ಯಾ. ಎಸ್.ಬಿ. ವಸ್ತ್ರಮಠ ನೀಡಿದ್ದಾರೆ. ಈ ಆದೇಶ ನ್ಯಾಯಾಂಗ ಇತಿಹಾಸದಲ್ಲಿಯೇ ತ್ವರಿತ ವಿಚಾರಣೆಯಾದ ಕ್ರಿಮಿನಲ್ ಪ್ರಕರಣವಾಗಿ ದಾಖಲಾಗಿದೆ. 23 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಶಿಕ್ಷೆ ಪ್ರಕಟಿಸಿದ ದಾಖಲೆ ಉತ್ತರಪ್ರದೇಶದಲ್ಲಿದೆ.