ದಾವಣಗೆರೆ: ಸ್ನೇಹಿತರ ನಡುವೆ ಜಗಳ; ಯುವಕನ ಬರ್ಬರ ಹತ್ಯೆ

Update: 2018-07-11 13:24 GMT

ದಾವಣಗೆರೆ,ಜು.11: ನಗರದ ಪಿಬಿ ರಸ್ತೆಯ ಪ್ರೀತಂ ಬಾರ್ ಎದುರಿನ ನಿರ್ಜನ ಪ್ರದೇಶದಲ್ಲಿ ಯುವಕನೊಬ್ಬನನ್ನು ಸಿಮೆಂಟ್ ಇಟ್ಟಿಗೆಯಿಂದ ತಲೆಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಇಲ್ಲಿನ ವಿನೋಬ ನಗರದ ವಾಸಿ ಭರತ್ (22 ವರ್ಷ) ಕೊಲೆಯಾದ ಯುವಕ. ಭರತ್‍ನನ್ನು ಪಿ.ಬಿ.ರಸ್ತೆಯ ಪ್ರೀತಂ ಬಾರ್ ಎದುರಿನ ಸುತ್ತಲೂ ಸಿಮೆಂಟ್ ಇಟ್ಟಿಗೆಯ ಕಾಂಪೌಂಡ್ ಕಟ್ಟಿರುವ ಜಾಗದೊಳಗೆ ಕರೆದೊಯ್ದ ದುಷ್ಕರ್ಮಿಗಳು ಅಲ್ಲೇ ಇದ್ದ ದೊಡ್ಡದಾದ ಸಿಮೆಂಟ್ ಇಟ್ಟಿಗೆಯಿಂದ ಭರತ್‍ನ ತಲೆಯ ಮೇಲೆ ಎತ್ತಿ ಹಾಕಿ, ಜಜ್ಜಿ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಪರಿಚಯಸ್ಥರೇ ಈ ಕೃತ್ಯ ಎಸಗಿರುವ ಅನುಮಾನಗಳಿವೆ.

ಭರತ್‍ನ ಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಸ್ನೇಹಿತರ ಮಧ್ಯೆ ಗಲಾಟೆಯಾಗಿ, ಆತನ ಸ್ನೇಹಿತರೇ ಹತ್ಯೆ ಮಾಡಿದ್ದಾರೆಂದು ಮೃತ ವಿಜಯ್ ಪಾಲಕರು ಆರೋಪಿಸಿದ್ದಾರೆ.

ಹತ್ಯೆಯಾದ ಯುವಕನ ಶವದ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ನಿರ್ಜನ ಪ್ರದೇಶದಲ್ಲಿ ಯುವಕನೊಬ್ಬನನ್ನು ಯಾರೋ ಹತ್ಯೆ ಮಾಡಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಸ್ಪಿ ಆರ್.ಚೇತನ್, ಎಎಸ್ಪಿ ಉದೇಶ್ ಹಾಗೂ ಸಬ್ ಇನ್ಸಪೆಕ್ಟರ್ ಸಿಬ್ಬಂದಿ, ಸ್ಥಳಕ್ಕೆ ಭೇಟ ನೀಡಿ ಪರಿಶೀಲಿಸಿದರು.

ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಬೆರಳಚ್ಚು ತಜ್ಞರು ಧಾವಿಸಿ, ಸಾಕ್ಷ್ಯ ಕಲೆ ಹಾಕಿದರು. ಶ್ವಾನದಳ ಸ್ಥಳಕ್ಕೆ ಕರೆಸಿದ್ದು, ಸುಮಾರು ದೂರದವರೆಗೆ ಹೋಗಿ ಶ್ವಾನ ನಿಂತಿದೆ. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News