ಹುಬ್ಬಳ್ಳಿ: ಅಂತಾರಾಜ್ಯ ಕಳವು ಆರೋಪಿಗಳು ಸೆರೆ; ಸೊತ್ತು ವಶ

Update: 2018-07-11 09:09 GMT

ಹುಬ್ಬಳ್ಳಿ, ಜು. 11: ಗಮನ ಬೇರೆ ಕಡೆಗೆ ಸೆಳೆದು ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳವು ಆರೋಪಿಗಳನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡು ಮೂಲದ, ಸತ್ಯಮೂರ್ತಿ ಜ್ಞಾನವೇಲು, ಕುಮಾರೇಶನ್ ಸೇಲ್ವರಾಜ್, ಕೆ ಬಾರದಿರಾಜ್ ಕೇಶವನ ಬಂಧಿತ ಆರೋಪಿಗಳು. ಬಂಧಿತರಿಂದ 1.50 ಲಕ್ಷ ರೂ. ಮೌಲ್ಯದ ಒಂದು ಲ್ಯಾಪ್ ಟಾಪ್ ಮತ್ತು  1 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ತಮಿಳುನಾಡು, ಮಹಾರಾಷ್ಟ್ರ, ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜೂ. 3 ರಂದು ಕೊಪ್ಪಿಕರ್ ರಸ್ತೆಯ ಸೆಟಲೈಟ್ ಬಿಲ್ಡಿಂಗ್ ಎದುರಿನ‌ ಕಾರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಸಾಜಿದ್ ಫರಾಶ್ ಎಂಬವರ ಕಾರಿನಲ್ಲಿನ 45 ಸಾವಿರ ರೂ. ಮೌಲ್ಯದ  ಲ್ಯಾಪ್ ಟಾಪ್ ಹಾಗೂ ಕಾಗದ ಪತ್ರಗಳನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಶಹರ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿತ್ತು. ರೋಪಿಗಳ ಹಿಂದೆ ಬಿದಿದ್ದ ಪೊಲೀಸರು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಹರ ಪೊಲೀಸ ಇನ್ಸ್‌ಪೆಕ್ಟರ್ ಭರತ ಎಸ್ ಆರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಸದಾನಂದ ಕಲಘಟಗಿ, ಮಂಜು ಹಾಲವರ, ಶ್ರೀನಿವಾಸ ಯರಗುಪ್ಪಿ, ಚಂದ್ರಶೇಖರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News