ಅಯ್ಯಂಗೇರಿ ದೇವಾಲಯದ ಬಳಿ ಕಾಡಾನೆ ಪ್ರತ್ಯಕ್ಷ: ಗ್ರಾಮದಲ್ಲಿ ಆತಂಕ

Update: 2018-07-11 11:47 GMT

ಮಡಿಕೇರಿ, ಜು.11: ಭಾಗಮಂಡಲ ಸಮೀಪ ಅಯ್ಯಂಗೇರಿ ಗ್ರಾಮದ ಚಿನ್ನತಪ್ಪ ದೇವಾಲಯ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಗ್ರಾಮದಲ್ಲಿ ಆತಂಕ ಮೂಡಿದೆ.

ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ನೆಲೆ ನಿಂತಿರುವ ಕಾಡಾನೆಗಳ ಹಿಂಡು ಕಾಫಿ ತೋಟ ಮತ್ತು ಬಾಳೆ ತೋಟಗಳಿಗೆ ನುಗ್ಗಿ ಹಾನಿ ಪಡಿಸಿವೆ. ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಯ ಭೀತರಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News