ಟಿಡಿಆರ್ ಶೃಂಗೇರಿ ಕ್ಷೇತ್ರದ ಶಾಶ್ವತ ಶಾಸಕರಾಗುತ್ತಾರೆ: ಎಂ.ಶ್ರೀನಿವಾಸ್

Update: 2018-07-15 18:34 GMT

ಎನ್.ಆರ್.ಪುರ, ಜು.15:  ಜನರ ಕಷ್ಟಗಳಿಗೆ ಸ್ಪಂದಿಸುವಂತಹ ನಾಯಕ ಶಾಸಕ ಟಿ.ಡಿ.ರಾಜೇಗೌಡ ಈ ಕ್ಷೇತ್ರದ ಶಾಶ್ವತ ಶಾಸಕರಾಗುತ್ತಾರೆ ಎಂದು ಮಾಜಿ ಎಂ.ಎಲ್.ಸಿ ಎಂ.ಶ್ರಿನಿವಾಸ್ ಭವಿಷ್ಯ ನುಡಿದರು

ಪಟ್ಟಣದ ತಾ.ಪಂ .ಆವರಣದಲ್ಲಿರುವ ಶಾಸಕರ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಜ್ಜನ ವ್ಯಕ್ತಿ, ಜನಾನುರಾಗಿ ಆದ ಟಿ.ಡಿ.ರಾಜೇಗೌಡರವರು ಶೃಂಗೇರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅನುಭವಿ ರಾಜಕಾರಿಣಿಯೂ ಆಗಿದ್ದಾರೆ. ಬಡವರ ಬಂಧು ಎಂದೇ ಹೆಸರುಗಳಿಸಿದ ಟಿ.ಡಿ.ರಾಜೇಗೌಡ ನನ್ನ ಕೈಯಿಂದಲೇ ಶಾಸಕರ ಕಚೇರಿಯನ್ನು ಉದ್ಘಾಟಿಸಿದ್ದಾರೆ. ನಾನು ಮಾಡಿದ ಅಲ್ಪ ಪ್ರಮಾಣದ ಕೆಲಸಕ್ಕೆ ಉತ್ತಮವಾದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಈ ಕ್ಷೇತ್ರದ ಅಭಿವೃಧ್ಧಿಗೆ ಟಿ.ಡಿ.ರಾಜೇಗೌಡ ಹಗಲಿರುಳು ಶ್ರಮಿಸಬೇಕು. ಈ ಮೂಲಕ ಜನರ ಮನದಾಳದಲ್ಲಿ ಬೇರೂರುವಂತಾಗಬೇಕಿದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಎಂ.ಶ್ರಿನಿವಾಸ್ ಅವರ ಅಮೃತ ಹಸ್ತದಿಂದಲೇ ಕಚೇರಿ ಉದ್ಘಾಟಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. ಆದ್ದರಿಂದ ಅವರಿಂದಲೇ ಶಾಸಕರ ಕಚೇರಿಗೆ ಇಂದು ವಿದ್ಯುಕ್ತ ಚಾಲನೆಯನ್ನು ನೀಡಲಾಗಿದೆ. ತಮ್ಮ ಹುಟ್ಟೂರಿನ ಅಭಿಮಾನದಿಂದ 100 ಕೋಟಿಗೂ ಅಧಿಕ ಅನುದಾನವನ್ನು ತಂದು ಊರಿನ ದೇವಸ್ಥಾನಗಳನ್ನು ಜೀರ್ಣೋಧ್ಧಾರ, ರಸ್ತೆಗಳ ಅಭಿವೃಧ್ಧಿ, ಚರ್ಚ್, ಮಸೀದಿ, ಮಂದಿರಗಳಿಗೆ ಸಾಕಷ್ಟು ಅನುದಾನವನ್ನು ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ನಗರ ಘಟಕದ ಅಧ್ಯಕ್ಷ ಅಂಜುಂ, ಈಚಿಕೆರೆಸುಂದರೇಶ್ ಮತ್ತು ಮುಖಂಡರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News