ಹಾಸನ: ಎಟಿಎಂ ಕಳವಿಗೆ ವಿಫಲ ಯತ್ನ

Update: 2018-07-18 16:53 GMT

ಹಾಸನ,ಜು.18: ನಗರದ ಆರ್.ಸಿ. ರಸ್ತೆ, ಅರಳಿಕಟ್ಟೆ ರಸ್ತೆ ಎದುರು ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಎಟಿಎಂನಲ್ಲಿರುವ ಹಣವನ್ನು ಕಳವು ಮಾಡಲು ವಿಫಲಯತ್ನ ನಡೆಸಿರುವ ಘಟನೆ ತಡರಾತ್ರಿ ನಡೆದಿದೆ.

ಎಟಿಎಂ ಒಳಗೆ ನುಗ್ಗಿರುವ ಕಳ್ಳರು ಮೊದಲು ಸಿಸಿ ಕ್ಯಾಮರವನ್ನು ಪೇಪರ್ ನಿಂದ ಮುಚ್ಚಿ, ಬಳಿಕ ಹಣವನ್ನು ದೋಚಲು ನಾನಾ ಪ್ರಯತ್ನ ಮಾಡಿದ್ದಾರೆ. ಕಬ್ಬಿಣದ ರಾಡುಗಳಿಂದ ಎಷ್ಟೆ ಪ್ರಯತ್ನ ಮಾಡಿದರೂ ಓಪನ್ ಮಾಡಲಾಗದೆ ಕೊನೆಗೆ ವಾಪಸ್ ಹೋಗಿದ್ದಾರೆ ಎಂದು ಹೇಳಲಾಗಿದೆ.

ವೃತ್ತ ನಿರೀಕ್ಷಕ ಸತ್ಯನಾರಾಯಣ್ ಮತ್ತು ಬಡಾವಣೆ ಪೊಲೀಸ್ ಠಾಣಾ ಸಬ್‍ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಮತ್ತು ಶ್ವಾನಧಳ ಸ್ಥಳ್ಕಾಗಮಿಸಿ ಪರಿಶೀಲಿಸಿ ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News