ಲೋಕಸಭೆ ಚುನಾವಣೆ: ಇಂದು ಮಮತಾ ಬ್ಯಾನರ್ಜಿ ರಣತಂತ್ರ ಪ್ರಕಟ

Update: 2018-07-21 04:30 GMT

ಕೊಲ್ಕತ್ತಾ, ಜು.21: ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಪಕ್ಷದ ಕಾರ್ಯತಂತ್ರವನ್ನು ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇಂದು ಆಚರಿಸಲಾಗುವ ವಾರ್ಷಿಕ ಹುತಾತ್ಮರ ದಿನ ರ್ಯಾಲಿಯಲ್ಲಿ ಪ್ರಕಟಿಸಲಿದ್ದಾರೆ.

1993ರಲ್ಲಿ 13 ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಜುಲೈ 21ನ್ನು ಪ್ರತಿ ವರ್ಷ ಹುತಾತ್ಮರ ದಿನವಾಗಿ ಟಿಎಂಸಿ ಆಚರಿಸುತ್ತಿದೆ. ಆಗ ಎಡರಂಗ ಅಧಿಕಾರದಲ್ಲಿತ್ತು. ಮಮತಾ ಬ್ಯಾನಜರ್ಜಿಯವರು ಪಶ್ಚಿಮ ಬಂಗಾಳ ಯುವ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದರು.

ಇಂದು ನಡೆಯುವ ರ್ಯಾಲಿಯಲ್ಲಿ ಮುಂದಿನ ಚುನಾವಣೆಯ ರಣತಂತ್ರ ಘೋಷಿಸಲಾಗುವುದು ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ. ಮಿಡ್ನಾಪುರ ರ್ಯಾಲಿಯಲ್ಲಿ ಬಿಜೆಪಿ ಮುಖಂಡರು ಮಾಡಿದ ಆರೋಪಗಳ ಬಗ್ಗೆ ಕೂಡಾ ಮಮತಾ ಇಲ್ಲಿ ಪ್ರತಿಕ್ರಿಯಿಸುವ ನಿರೀಕ್ಷೆ ಇದೆ ಎಂದು ಹೇಳಿವೆ.

ಮುಂದಿನ ಚುನಾವಣೆ ಬಳಿಕ ಮಮತಾ ಬ್ಯಾನರ್ಜಿ ಮಹತ್ವದ ಪಾತ್ರವನ್ನು ವಹಿಸಲಿದ್ದಾರೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ವಿಶೇಷ ಮಹತ್ವವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News