ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾಟ: ಯೂತ್ ಫೋರ್ ಜಸ್ಟೀಸ್ ಮಡಿಲಿಗೆ ಪ್ರಶಸ್ತಿ

Update: 2018-07-23 11:41 GMT

ಮಡಿಕೇರಿ, ಜು.23 : ಮೂರ್ನಾಡಿನ ವಿದ್ಯಾಸಂಸ್ಥೆ  ಮೈದಾನದಲ್ಲಿ ನಡೆದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಪ್ರಥಮ ವರ್ಷದ ಕಾಲ್ಚೆಂಡು ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಯೂತ್ ಫೋರ್ ಜಸ್ಟೀಸ್ ಸುಂಟಿಕೊಪ್ಪ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಯಂಗ್ ಇಂಡಿಯಾ ಪಾಲಿಬೆಟ್ಟ, ತೃತೀಯ ಸ್ಥಾನವನ್ನು ಅಮ್ಮತ್ತಿ ಎಫ್.ಸಿ ಹಾಗೂ ನಾಲ್ಕನೇ ಸ್ಥಾನವನ್ನು ಕಬಡಕ್ಕೇರಿ ತಂಡ ತನ್ನದಾಗಿಸಿಕೊಂಡಿತು.

ಮೊದಲನೇ ಸೆಮಿಫೈನಲ್ ಪಂದ್ಯವು  ಯೂತ್ ಫೋರ್ ಜಸ್ಟೀಸ್ ಹಾಗೂ ಕಬಡಕ್ಕೇರಿ ತಂಡಗಳ ನಡುವೆ ನಡೆಯಿತು. ಸುಂಟಿಕೊಪ್ಪ ತಂಡವು 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆಯಿಟ್ಟಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅಮ್ಮತ್ತಿ ಎಫ್.ಸಿ ತಂಡವನ್ನು ಪಾಲಿಬೆಟ್ಟ ತಂಡವು 2-1 ಗೋಲುಗಳ ಅಂತರದಿಂದ ಸೋಲಿಸಿತು.

ಯೂತ್ ಫೋರ್ ಜಸ್ಟೀಸ್ ಹಾಗೂ ಯಂಗ್ ಇಂಡಿಯಾ ಪಾಲಿಬೆಟ್ಟ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಅಬೂಬಕರ್ ಅವರ ಏಕೈಕ ಗೋಲಿನ ನೆರವಿನಿಂದ ಪ್ರಥಮ ವರ್ಷದ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದ ಪ್ರಥಮ ಸ್ಥಾನವನ್ನು ಸುಂಟಿಕೊಪ್ಪ ತಂಡವು ತಮ್ಮದಾಗಿಸಿದರು.

ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಕಬಡಕ್ಕೇರಿ ತಂಡವನ್ನು ಮಣಿಸಿ ಅಮ್ಮತ್ತಿ ಎಫ್.ಸಿ ತಂಡವು ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು.
ಪಂದ್ಯಾಟದ ಉತ್ತಮ ತಂಡವಾಗಿ ಎನ್.ವೈ.ಸಿ ಚಾಮಿಯಾಲ, ಉತ್ತಮ ಆಟಗಾರನಾಗಿ ಸುಂಟಿಕೊಪ್ಪ ತಂಡದ ಅಬೂಬಕರ್, ಉತ್ತಮ ಗೋಲ್ ಕೀಪರ್ ಆಗಿ ನಾಸೀರ್ ಪಡೆದುಕೊಂಡರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಮುಸ್ಲಿಂ ಫುಟ್ಬಾಲ್ ಪಂದ್ಯಾಟದ ಸಂಸ್ಥಾಪಕ ಆಶಿಫ್ (ಆಪು) ವಹಿಸಿಕೊಂಡರು. 
ಇದೇ ಸಂದರ್ಭ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಭಾರತ ತಂಡದ ಸಬ್ ಜೂನಿಯರ್ ತಂಡವನ್ನು ಪ್ರತಿನಿಧಿಸಿದ ಫಾಹಿದ್, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸುದ್ದಿಯಾಗಿ ಮುಖ್ಯ ಮಂತ್ರಿಗಳ ಗಮನ ಸೆಳೆದ ಕಾಳೇರ ಫತಹ್ ಹಾಗೂ ದೈಹಿಕ ಶಿಕ್ಷಕಿಯಾಗಿ ಸುದೀರ್ಘ ವರ್ಷ ಕಾರ್ಯನಿರ್ವಹಿಸಿದ ಪುಷ್ಪ ಕುಮಾರಿ ಅವರನ್ನು ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ಕರೀಂ ಬಾಯಿ ವ್ಯವಸ್ಥಾಪಕರು ಅರಬ್ ಕಮಿಟಿ, ಅಬ್ದುಲ್ ರಶೀದ್ ಎಡಪಲ, ದೈಹಿಕ ಶಿಕ್ಷಕಿ ಪುಷ್ಪ ಕುಮಾರಿ, ಮೂರ್ನಾಡು ಗ್ರಾ.ಪಂ ಸದಸ್ಯರಾದ ಎಂ.ಎಂ ಸಾದಿಕ್, ಕ್ರಿಯೇಟಿವ್ ಖಲೀಲ್, ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ (ಅಂದಾಯಿ), ಮೂರ್ನಡು ಯುವ ಕಾಂಗ್ರೆಸ್ ಅಧ್ಯಕ್ಷ ಸೈಫ್ ಆಲಿ , ಜಿಲ್ಲಾ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಾಸೀರ್ ಕೆ.ಜಿ, ಅನ್ಸಾಫ್, ಎನ್.ಯಿ.ಖಾಲೀದ್ ಕೊಂಡಂಗೇರಿ ಉಪಸ್ಥಿತರಿದ್ದರು. ವೀಕ್ಷಕ ವಿವರಣೆಯನ್ನು ಅಮ್ಮತ್ತಿಯ ಆಸಿಫ್ ನೆರವೇರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News