ಕ್ರಿಮಿನಲ್ ನನ್ನು ಬಂಧಿಸಲು ಹೋದ ಎಎಸ್ಸೈಯನ್ನು ಹೊಡೆದು ಕೊಂದರು

Update: 2018-07-25 09:39 GMT

ಮಧ್ಯಪ್ರದೇಶ, ಜು.25: ವಾಂಟೆಡ್ ಕ್ರಿಮಿನಲ್ ಒಬ್ಬನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯೊಬ್ಬರನ್ನು ಕ್ರಿಮಿನಲ್ ಗಳ ಹಾಗು ಬೆಂಬಲಿಗರು ಥಳಿಸಿ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ 8 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಉಮ್ರೇತ್ ಪೊಲೀಸ್ ಠಾಣೆಯ ಎಎಸ್ಸೈ ದೇವ್ ಚಾಂದ್ ನಾಗ್ಲೆ ಜೋಹರ್ ಸಿಂಗ್ ಎಂಬ ಕ್ರಿಮಿನಲ್ ನನ್ನು ಹಿಡಿಯಲು ಜಮುನಿಯಾ ಜೆತು ಗ್ರಾಮಕ್ಕೆ ತೆರಳಿದ್ದರು. ಆದರೆ ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದಿದ್ದ 8-10 ಮಂದಿಯ ಗುಂಪೊಂದು ಅವರ ಮೇಲೆ ದಾಳಿ ನಡೆಸಿತು ಎನ್ನಲಾಗಿದೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News