ದಿಲ್ಲಿ: ಕಾಂಗ್ರೆಸ್ ಕಾರ್ಯಕರ್ತರಿಂದ ದ್ವೇಷದ ವಿರುದ್ಧ ಸ್ನೇಹದಿಂದ ಅಪ್ಪಿಕೊಳ್ಳುವ ಅಭಿಯಾನ
Update: 2018-07-25 10:45 GMT
ಹೊಸದಿಲ್ಲಿ, ಜು.25: ಸ್ನೇಹದಿಂದ ಅಪ್ಪಿಕೊಳ್ಳುವ ಅಭಿಯಾನವೊಂದನ್ನು ಕಾಂಗ್ರೆಸ್ ಕಾರ್ಯಕರ್ತರು ದಿಲ್ಲಿಯಲ್ಲಿ ನಡೆಸಿದರು. ಜುಲೈ 20ರಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ವೇಳೆ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ಅಪ್ಪಿಕೊಂಡ ನಂತರ ಕಾಂಗ್ರೆಸ್ ಕಾರ್ಯಕರ್ತರು ಈ ಅಭಿಯಾನ ಆರಂಭಿಸಿದ್ದಾರೆ.
“ದ್ವೇಷವನ್ನು ತೊರೆಯಿರಿ. ದೇಶವನ್ನು ಕಾಪಾಡಿ” ಎಂದು ಪ್ಲೇಕಾರ್ಡ್ ಗಳನ್ನು ಮತ್ತು ಬ್ಯಾನರ್ ಗಳನ್ನು ಹಿಡಿದ ಕಾಂಗ್ರೆಸ್ ಕಾರ್ಯಕರ್ತರು ಸ್ನೇಹಪೂರ್ವಕವಾಗಿ ಹಲವರನ್ನು ಅಪ್ಪಿಕೊಂಡರು.
“ದ್ವೇಷವನ್ನು ಅಳಿಸಿ ದೇಶವನ್ನು ರಕ್ಷಿಸಬೇಕೆಂದು ಸಂದೇಶ ರವಾನಿಸುವುದು ನಮ್ಮ ಉದ್ದೇಶವಾಗಿದೆ. ಅಪ್ಪಿಕೊಳ್ಳುವುದು ಸ್ನೇಹಹಸ್ತ ಚಾಚುವ ಒಂದು ವಿಧಾನವಾಗಿದೆ” ಎಂದು ದಿಲ್ಲಿಯ ಕಾಂಗ್ರೆಸ್ ಕಾರ್ಯಕರ್ತ ಅನಿರುದ್ಧ್ ಶರ್ಮಾ ಹೇಳಿದರು.