ಮಡಿಕೇರಿ: ಸಾಲ ಬಾಧೆ; ಮಹಿಳೆ ಆತ್ಮಹತ್ಯೆಗೆ ಶರಣು
Update: 2018-07-25 12:20 GMT
ಮಡಿಕೇರಿ, ಜು.25: ಸಾಲದಬಾಧೆ ತಾಳಲಾರದೆ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಟಿ.ಶೆಟ್ಟಿಗೇರಿಯ ಚೀಪೆಕೊಲ್ಲಿ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಅಮಾನ (48) ಎಂಬುವವರೇ ಮೃತ ಮಹಿಳೆ. ಸುಮಾರು 6 ವರ್ಷಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡಿದ್ದ ಅಮಾನ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತಿದ್ದರು. ಒಬ್ಬ ಪುತ್ರ ಮತ್ತು ಪುತ್ರಿಯನ್ನು ಹೊಂದಿರುವ ಅಮಾನ ಮಹಿಳಾ ಸಂಘಗಳಲ್ಲಿ ಸಾಲ ಮಾಡಿದ್ದರು ಎಂದು ಹೇಳಲಾಗಿದೆ.
ಬಡ್ಡಿಯನ್ನು ಕೂಡ ಪಾವತಿಸಲಾಗದೆ ಸಂಕಷ್ಟ ಮತ್ತು ಒತ್ತಡಕ್ಕೆ ಸಿಲುಕಿದ್ದ ಅಮಾನ ನೇಣಿಗೆ ಶರಣಾಗಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.