9 ಐಎಎಸ್ ಅಧಿಕಾರಿಗಳ ವರ್ಗಾವಣೆ

Update: 2018-07-29 11:54 GMT

ಬೆಂಗಳೂರು, ಜು. 29: ದಿಢೀರ್ ಬೆಳವಣಿಗೆಯೊಂದರಲ್ಲಿ ಆಡಳಿತದ ದೃಷ್ಟಿಯಿಂದ ಒಂಭತ್ತು ಮಂದಿ ಐಎಎಸ್ ಅಧಿಕಾರಿಗಳನ್ನು ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣವೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕರೀಗೌಡ-ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ, ಎಸ್.ಪಾಲಯ್ಯ- ಕಾರ್ಮಿಕ ಇಲಾಖೆ ಆಯುಕ್ತ, ಜೆ.ಮಂಜುನಾಥ್- ಕೋಲಾರ ಜಿಲ್ಲಾಧಿಕಾರಿ, ಕುರ್ಮಾರಾವ್ ಎಂ.-ಯಾದಗಿರಿ ಜಿಲ್ಲಾಧಿಕಾರಿ, ಅನಿರುದ್ಧ್ ಶ್ರವಣ್-ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ರಾಕೇಶ್ ಕುಮಾರ್-ತುಮಕೂರು ಜಿಲ್ಲಾಧಿಕಾರಿ.

ಮುಹಮ್ಮದ್ ರೋಷನ್-ಉಪ ಕಾರ್ಯದರ್ಶಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್, ಎನ್.ಶಿವಶಂಕರ-ಸಿಇಒ ಕೆಐಎಡಿಬಿ, ಕೆ.ಶ್ರೀನಿವಾಸ್-ಆಯುಕ್ತರು ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ಇಲ್ಲಿಗೆ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News