ಕಳಸದಲ್ಲಿ ಭಾರೀ ಮಳೆ: ಕೃಷಿಕರಲ್ಲಿ ಆತಂಕ

Update: 2018-08-08 12:48 GMT

ಕಳಸ, ಆ.8: ಹೋಬಳಿಯಾದ್ಯಂತ ಕಳೆದ ಒಂದು ವಾರಗಳಿಂದ ತಣ್ಣಗಾಗಿದ್ದ ಮಳೆ ಮತ್ತೆ ಮುಂದುವರಿದಿದ್ದು, ಕೃಷಿಕರಲ್ಲಿ ಅತಂಕ ಹೆಚ್ಚಿಸಿದೆ.

ಮಂಗಳವಾರದಿಂದ ಹೋಬಳಿಯಾದ್ಯಂತ ಮಳೆಯು ಪ್ರಾರಂಭವಾಗಿ ಬುಧವಾರವು ಮುಂದುವರೆಯಿತು. ಭದ್ರಾ ನದಿಯಲ್ಲಿ ಕಡಿಮೆಯಾಗಿದ್ದ ನೀರಿನ ಮಟ್ಟ ಹೆಚ್ಚಾಗಿ ತುಂಬಿ ಹರಿಯಲಾರಂಬಿಸಿದೆ. ಕುದುರೆಮುಖ ಭಾಗದಲ್ಲಿ ಅತೀ ಹೆಚ್ಚಿನ ಮಳೆ ಸುರಿಯುತ್ತಿದೆ.

ಈಗಾಗಲೇ ಈ ಭಾಗದಲ್ಲಿ ಅತೀ ಹೆಚ್ಚು ಮಳೆ ಸುರಿದ ಪರಿಣಾಮ ಅಡಕೆ ಮತ್ತು ಕಾಫಿ ಬೆಳೆಗೆ ರೋಗ ತಗುಲಿ ಕಾಫಿ, ಅಡಕೆ ಉದುರಿ ಬೀಳಲು ಪ್ರಾರಂಭವಾಗಿದೆ. ಇರುವ ಬೆಳೆಯನ್ನು ಉಳಿಸಿಕೊಳ್ಳಲು ಔಷದಿ ಸಿಂಪಡಿಸಲು ಕೂಡ ಮಳೆ ಬಿಡದೆ ಇರುವುದರಿಂದ ಬೆಳೆಗಾರರು ಕಂಗಲಾಗಿದ್ದಾರೆ. ಈಗ ಮತ್ತೆ ಮಳೆ ಬಿರುಸುಗೊಂಡ ಪರಿಣಾಮ ಬೆಳೆಗಾರರು ಮತ್ತಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News