ಚನ್ನವೀರ ಕಣವಿ ನಿವಾಸಕ್ಕೆ ವಿಶುಕುಮಾರ್ ಭೇಟಿ

Update: 2018-08-08 14:36 GMT

ಧಾರವಾಡ, ಆ.8: ಹಿರಿಯ ಕವಿ ನಾಡೋಜ, ಡಾ.ಚನ್ನವೀರ ಕಣವಿ ನಿವಾಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ನಿರ್ದೇಶಕ ಎನ್.ಆರ್.ವಿಶುಕುಮಾರ್ ಬುಧವಾರ ಭೇಟಿ ನೀಡಿ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದರು.

ಮೈಸೂರು ಮತ್ತು ಧಾರವಾಡ ಎರಡೂ ನಗರಗಳು ಕರ್ನಾಟಕದ ಮಹತ್ವದ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಕರ್ನಾಟಕ ಏಕೀಕರಣ ಚಳವಳಿ ಸೇರಿದಂತೆ ಸಾರಸ್ವತ ಲೋಕಕ್ಕೆ ಧಾರವಾಡ ಭಾಗದ ಕೊಡುಗೆ ಅಪಾರವಾಗಿದೆ. ಕನ್ನಡ ಸಮನ್ವಯ ಕವಿ ಎನಿಸಿಕೊಂಡಿರುವ ಚನ್ನವೀರ ಕಣವಿ ಅವರಂತಹ ಹಿರಿಯರ ಮಾರ್ಗದರ್ಶನ ನಾಡಿಗೆ ಅಗತ್ಯವಿದೆ ಎಂದು ವಿಶುಕುಮಾರ್ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕವಯತ್ರಿ ಎಚ್.ಆರ್.ಸುಜಾತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ, ಬಸವರಾಜ ಹೂಗಾರ, ಸಹಾಯಕ ನಿರ್ದೇಶಕ ಎಸ್.ಕೆ.ರಂಗಣ್ಣವರ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಹಾಗೂ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News