ಬಾಗೇಪಲ್ಲಿ: ತಾಲೂಕು ಬಿಜೆಪಿ ಘಟಕದಿಂದ ವಾಜಪೇಯಿಗೆ ಶ್ರದ್ದಾಂಜಲಿ

Update: 2018-08-17 11:33 GMT

ಬಾಗೇಪಲ್ಲಿ,ಆ.17: ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿ ರವರು ನಿಧನ ಹೊಂದಿರುವ ಹಿನ್ನಲೆಯಲ್ಲಿ ತಾಲೂಕು ಬಿಜೆಪಿ ಘಟಕದಿಂದ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ವಾಜಪೇಯಿರವರ ಭಾವ ಚಿತ್ರಕ್ಕೆ ಹಾರ ಹಾಕಿ ಶ್ರದ್ದಾಂಜಲಿ ಸಲ್ಲಿಸಿದರು. 

ಈ ಸಂದರ್ಭ ಮಂಡಲಾಧ್ಯಕ್ಷ ಎಸ್.ಟಿಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ರಾಜ್ಯ ಒಬಿಸಿ ಕಾರ್ಯಕಾರಿಣಿ ಸದಸ್ಯ ಜಿ.ವಿ.ಕೃಷ್ಣಯ್ಯ,ಜಿಲ್ಲಾ ಸ್ಲಂಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ, ಮುಖಂಡರಾದ ನಂಜೇಶರೆಡ್ಡಿ, ಶಿವಪ್ಪ, ಲೋಕೇಶ್, ನಿರ್ಮಲಮ್ಮ, ಸತೀಶ್ ಕುಮಾರ್, ಮಾಧ್ಯಮ ವಕ್ತಾರ ಧೀರಜ್, ಬಾಬಾ ಫಕೃದೀನ್, ಬಾಬುರೆಡ್ಡಿ, ರವಿ ಕುಮಾರ್, ಮಮತಮ್ಮ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News