ಮಡಿಕೇರಿ :ಮೃತರ ಕುಟುಂಬಕ್ಕೆ ಚೆಕ್ ವಿತರಿಸಿದ ಸಿಎಂ

Update: 2018-08-19 19:09 GMT

ಮಡಿಕೇರಿ, ಆ.19 : ಭೂಕುಸಿತದಿಂದಾಗಿ ಮಗನನ್ನು ಕಳೆದುಕೊಂಡ ತಂದೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ 5 ಲಕ್ಷ ರು.ಗಳ ಚೆಕ್ ನೀಡಿ ಸಾಂತ್ವನ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕುಮಾರಸ್ವಾಮಿ ಈ ಸಂದರ್ಭ ಆ.16 ರಂದು ಕಾಟಕೇರಿಯಲ್ಲಿ ಭೂಕುಸಿತದಿಂದಾಗಿ ಪ್ರಾಣ ಕಳೆದುಕೊಂಡ ಪೊಲೀಸ್ ಸಿಬ್ಬಂದಿ ಯಶವಂತ್ ತಂದೆ ಅಚ್ಚಲ್ ಪಾಡಿ ಗಣಪತಿ ಅವರಿಗೆ 5 ಲಕ್ಷ ರು. ಗಳ ಚೆಕ್ ನೀಡಿದರು. ಈ ಸಂದರ್ಭ ಮಗನನ್ನು ಕೊಡಿ ಎಂದು ಗಣಪತಿ ಬಿಕ್ಕಿ ಬಿಕ್ಕಿ ಅತ್ತರು. ಮುಖ್ಯಮಂತ್ರಿಯಾದಿಯಾಗಿ ಸ್ಥಳದಲ್ಲಿದ್ದ ಉನ್ನತಾಧಿಕಾರಿಗಳು ಗಣಪತಿಗೆ ಸಾಂತ್ವನ ಹೇಳಿದರು. ಅಂತೆಯೇ, ಭೂಕುಸಿತದಿಂದ ಮೃತಪಟ್ಟ ವೆಂಕಟರಮಣ ಅವರ ಪತತ್ನಿ ಮೀನಾ ಕುಮಾರಿ ಅವರಿಗೂ ಮುಖ್ಯಮಂತ್ರಿಗಳು ಚೆಕ್ ನೀಡಿ ಸಾಂತ್ವನ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News