ಕೊಳ್ಳೇಗಾಲ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಾಗಿ ಪಿ. ರಾಜೇಂದ್ರ ಆಯ್ಕೆ

Update: 2018-08-20 05:57 GMT

ಹನೂರು,ಆ.13 : ಕೂಳ್ಳೇಗಾಲ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ರಾಮಾಪುರದ ಪಿ. ರಾಜೇಂದ್ರರನ್ನು ಶಾಸಕ ಆರ್.ನರೇಂದ್ರರಾಜು ಗೌಡ ಅಭಿನಂಧಿಸಿದರು.

ಕೂಳ್ಳೇಗಾಲ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನ ನೂತನ ನಿರ್ದೆಶಕರಾದ ರಾಮಾಪರ ಪಿ.ರಾಜೇಂದ್ರ ಮಾತನಾಡಿ ಇತ್ತೀಚೆಗೆ ನಡೆದ ಈ ಚುನಾವಣೆಯಲ್ಲಿ  ಅವಿರೋಧವಾಗಿ ಬ್ಯಾಂಕ್‍ನ ನಿರ್ದೇಶಕರಾಗಿ ಆಯ್ಕೆಯಾಗಲು ಸಹಕರಿಸಿ ನನ್ನ ಬೆಂಬಲಕ್ಕೆ ನಿಂತ ಸರ್ವರರಿಗೂ ಸಹ ಅಭಿನಂದನೆ ಸಲ್ಲಿಸಿದರು ಮತ್ತು ಬ್ಯಾಂಕ್‍ನ ಅಭಿವೃದ್ದಿಗೆ ನಿರ್ದೇಶಕನಾಗಿ ನಾನು ಎಲ್ಲಾ ಸದಸ್ಯರ ಜೊತೆ ಕೂಡಿ ಬ್ಯಾಂಕ್ ಯಶಸ್ಸಿಗೆ ಶ್ರಮಿಸುವೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾದ್ಯಕ್ಷ ಹಾಗೂ ಹಾಲಿ ಸದಸ್ಯರಾದ ಬಸವರಾಜು ಸೇರಿದಂತೆ ಹಲವಾರು ಗಣ್ಯರು ನೆರದಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News