ಹನೂರು: ಕಾಂಗ್ರೆಸ್ ಸೇರಿದ ಬಿಜೆಪಿ ಕಾರ್ಯಕರ್ತ ಪಳನಿ

Update: 2018-08-20 09:35 GMT

ಹನೂರು, ಆ. 20: ರಾಮಾಪುರ ಗ್ರಾಮ ಪಂಚಾಯತ್ ವಾರ್ಡ್ ನಂ. 11 ರ ನಾಗಣ್ಣನಗರದ  ಬಿಜೆಪಿ ಬೆಂಬಲಿತ ಸದಸ್ಯ ಪಳನಿ ಎಂಬುವವರು  ಹನೂರು ಶಾಸಕ ಆರ್. ನರೇಂದ್ರರಾಜು ಗೌಡ ಹಾಗೂ ಜಿ.ಪಂ. ಸದಸ್ಯ ಬಸವರಾಜು ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ನಂತರ ಮಾತನಾಡಿದ ಗ್ರಾಪಂ ಸದಸ್ಯ ಪಳನಿ ಹನೂರು  ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯಲ್ಲಿ ಕಾರ್ಯಕರ್ತರುಗಳ ನಡುವೆ  ಒಗ್ಗಟ್ಟಿಲ್ಲದೆ  ನಮ್ಮಂತಹ ನಿಷ್ಠಾವಂತ ಕಾರ್ಯಕರ್ತರುಗಳಿಗೆ ಬೆಲೆ  ಮತ್ತು ಸ್ಪಂದನೆ ಸಿಗುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಹಗಳಿರಲು ಜೊತೆಗಿದ್ದ ನಮ್ಮಂತಹ ಹಲವಾರು ಕಾರ್ಯಕರ್ತರನ್ನು ಇತ್ತಿಚ್ಚೀನ ದಿನಗಳಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಚುನಾವಣೆ ಆದ ನಂತರದ ದಿನಗಳಲ್ಲಿ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಕಾರ್ಯಕರ್ತರುಗಳ ಬಳಿ ಸುಳಿಯದೇ ಇದ್ದುದರಿಂದ  ಬೇಸತ್ತು  ಮತ್ತು ಕಾಂಗ್ರೇಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಶಾಸಕರು ಮತ್ತು ಜಿಪಂ ಸದಸ್ಯರ ಸಮ್ಮುಖದಲ್ಲಿ ಸೇರ್ಪಡೆ ಆಗುತ್ತಿದ್ದೀನೆ ಎಂದು ತಿಳಿಸಿದರು. ಈ ಸಂದರ್ಭ  ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಾದ ಪಿ . ರಾಜೇಂದ್ರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News