ಸುಂಟಿಕೊಪ್ಪ: ನೆರೆ ಸಂತ್ರಸ್ಥರ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಪೂಜೆ

Update: 2018-08-25 12:27 GMT

ಸುಂಟಿಕೊಪ್ಪ, ಆ.25: ಜಲ ಪ್ರಳಯ ಸಂತ್ರಸ್ಥರ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. 

ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಿತ್ಯಾನಂದ ವಿವೇಕ ವಂಶಿ ವಿವೇಕ ಶಿಕ್ಷಣ ವಾಹಿನಿಯ ಮಂಡ್ಯದ ಪ್ರಮೋದ್ ಭಾರ್ಗವ ಅವರ ನೇತೃತ್ವದಲ್ಲಿ ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಭಾವಚಿತ್ರವನ್ನು ಹೂಗಳಿಂದ ಅಲಂಕೃತಗೊಳಿಸಿ ವಿಶೇಷ ಭಜನೆ, ಕಥೆಗಳನ್ನು ಹೇಳುವ ಮೂಲಕ ಹಬ್ಬದ ಮಹತ್ವವನ್ನು ಸಂತ್ರಸ್ತರಿಗೆ ಮನವರಿಕೆ ಮಾಡಿದರಲ್ಲದೆ, ವಿಶೇಷ ಪೂಜೆಯನ್ನು ಸಂತ್ರಸ್ತರೊಂದಿಗೆ ಸೇರಿ ನೆರವೇರಿಸಿದರು. 

ನೂರಾರು ಸಂಖ್ಯೆಯಲ್ಲಿರುವ ಸಂತ್ರಸ್ತರು ಹಬ್ಬದಲ್ಲಿ ಪಾಲ್ಗೊಂಡು ವಿಶೇಷ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News